Advertisement

ಫೋನ್ ಕದ್ದಾಲಿಕೆಯಲ್ಲಿ ಹಲವರು ಭಾಗಿ : ಪ್ರತಾಪಗೌಡ ಪಾಟೀಲ್

09:56 AM Aug 16, 2019 | Team Udayavani |

ಕೊಪ್ಪಳ : ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಕೂಡ ಶಾಮೀಲಾಗಿದ್ದರೆಂದು ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿಕೆ ನೀಡಿದ್ದಾರೆ.

Advertisement

ನನ್ನ ಮತ್ತು ನನ್ನ ಆಪ್ತ ಕಾರ್ಯದರ್ಶಿಯ ಫೋನ್ ಕೂಡ ಕದ್ದಾಲಿಕೆ ಮಾಡಲಾಗಿದ್ದು ಇದರೊಂದಿದೆ ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವುದರಿಂದ ಈ ಪ್ರಕರಣವನ್ನು ಎಸ್ಐಟಿ ಅಥವಾ ಸಿಐಡಿ ತನಿಖೆಗೆ ವಹಿಸುವುದು ಸೂಕ್ತ ಎಂದು ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.

ಈಗಿನ ಸರಕಾರ ಈ ಪ್ರಕರಣವನ್ನು ಈಗಾಗಲೇ ಗಂಭೀರವಾಗಿ ಪರಿಗಣಿಸಿದೆ ಹಿಂದಿನ ಸರಕಾರ ಫೋನ್ ಕದ್ದಾಲಿಕೆ ಮಾಡಿರುವ ಅನುಮಾನವಿದೆ ಹಾಗಾಗಿ ತ್ವರಿತವಾಗಿ ಉನ್ನತ ಮಟ್ಟದ ತನಿಖೆಗೆ ಸರಕಾರ ಮುಂದಾಗಬೇಕೆಂದು ಪ್ರತಾಪ್ ಗೌಡ ಪಾಟೀಲ್ ತಿಳಿಸಿದರು.

ಪೋನ್ ಕದ್ದಾಲಿಕೆ ಅಕ್ಷಮ್ಯ ಅಪರಾಧ ಈ ಹಿಂದೆ ಅತೃಪ್ತ ಶಾಸಕರ ಪೋನ್ ಕದ್ದಾಲಿಕೆ ಆಗಿದ್ದು ಈ ಬಗ್ಗೆ ಎರಡು ದಿನದೊಳಗೆ ಅನರ್ಹ ಶಾಸಕರು ಸಭೆ ಸೇರಿ ಸಭೆಯಲ್ಲಿ ವಿಷಯದ ಬಗ್ಗೆ ತೀರ್ಮಾನಿಸಿ ಹೈಕೋರ್ಟ್ ಮೂಲಕ‌‌ ಉನ್ನತ ತನಿಖೆಗೆ ಕೋರುತ್ತೇವೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next