Advertisement

ಮಾನ್ವಿ ಪುರಸಭೆ ಆಡಳಿತದಿಂದ ಕೆರೆಗೆ ಬಾಗಿನ

03:17 PM Apr 19, 2022 | Team Udayavani |

ಮಾನ್ವಿ: ಕೆರೆಗೆ ನೀರು ತುಂಬಿಸಲು ಪುರಸಭೆ ಸಿಬ್ಬಂದಿ ಹಗಲಿರುಳು ಶ್ರಮಿಸಿದ್ದಾರೆ. ಕೆರೆ ತುಂಬಿರುವುದರಿಂದ ಪಟ್ಟಣಕ್ಕೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ಪುರಸಭೆ ಅಧ್ಯಕ್ಷೆ ರಶೀದಾ ಬೇಗಂ ತಿಳಿಸಿದರು.

Advertisement

ಪಟ್ಟಣದ ಕುಡಿಯುವ ನೀರು ಪೂರೈಸುವ ರಬ್ಬಣಕಲ್‌ ಕೆರೆ ತುಂಬಿರುವುದರಿಂದ ಪುರಸಭೆ ಆಡಳಿತದಿಂದ ಕೆರೆಗೆ ಬಾಗಿನ ಅರ್ಪಿಸಿ ಗಂಗೆ ಪೂಜೆ ನೆರವೇರಿಸಿ ಮಾತನಾಡಿದರು.

ನಂತರ ಕೆರೆಗೆ ನೀರು ತುಂಬಿಸಲು ಶ್ರಮಿಸಿದ ಪುರಸಭೆ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಎಐಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಎನ್‌.ಎಸ್‌.ಬೋಸರಾಜು, ಮಾಜಿ ಶಾಸಕ ಹಂಪಯ್ಯ ನಾಯಕ, ಪುರಸಭೆ ಮುಖ್ಯಾ ಧಿಕಾರಿ ಗಂಗಾಧರ, ಜೆ.ಇ. ಶರಣಪ್ಪ, ಪುರಸಭೆ ಸದಸ್ಯರಾದ ಶರಣಪ್ಪಗೌಡ, ಕೆ.ಸುಖಮುನಿ, ಹುಸೇನ ಬಾಷಾ, ರೇವಣಸಿದ್ದಯ್ಯ, ಶೇಕ್‌ ಉಮರಿ, ರಾಮಕೃಷ್ಣ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಬ್ದುಲ್‌ ಗಫೂರ್‌ ಸಾಬ್‌, ಮುಖಂಡರಾದ ಕೆ.ಶರಣಪ್ಪ ಕುಡದಿನ್ನಿ, ಸಬ್ಜಲಿ ಸಾಬ್‌, ವೀರೇಶ, ಚಂದ್ರ ಕಾಜಗಾರ, ಸತ್ತರ ಬಂಗ್ಲೆವಾಲೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next