Advertisement

ರಾಜಧಾನಿಯಲ್ಲಿ ಎಗ್ಗಿಲ್ಲದೆ ನಡೆದಿದೆ “ಮ್ಯಾನ್ಯುಯಲ್‌ ಸ್ಕ್ಯಾವೆಂಜಿಂಗ್‌’

12:10 PM Dec 09, 2020 | Suhan S |

ಬೆಂಗಳೂರು: “ದೀಪದ ಕೆಳಗೆ ಕತ್ತಲು’ ಎಂಬಂತೆ ಇಡೀ ದೇಶದಲ್ಲೆ ಮೊದಲು ಅನಾಗರಿಕ ಹಾಗೂ ಅನಿಷ್ಠ ಮಲಹೊರುವ ಪದ್ಧತಿ ನಿರ್ಮೂಲನೆಗೆ ಕಾಯ್ದೆ ಜಾರಿಗೆ ತಂದ ಹೆಗ್ಗಳಿಕೆ ಹೊಂದಿರುವ ಕರ್ನಾಟಕದಲ್ಲಿ ಈಗಲೂ ಈ ಅನಿಷ್ಠ ಪದ್ಧತಿ ಜಾರಿಯಲ್ಲಿದೆ. ಈ ಅನಿಷ್ಠ ಪದ್ಧತಿಗೆ ಸಿಲುಕಿ ಪ್ರಾಣ ಕಳೆದುಕೊಂಡವರ ಸಂಖ್ಯೆ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿದೆ.

Advertisement

“ಮಲ ಹೊರುವ ಪದ್ಧತಿ ಮತ್ತು ಒಣ ಶೌಚಾಲಯಗಳ ನಿರ್ಮೂಲನಾ ಕಾಯ್ದೆಯನ್ನು 1972 ರಲ್ಲಿ ಇದೇ ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತರಲಾಯಿತು. ಕರ್ನಾಟಕ ಮೂಲದ ಬೇಜ್ವಾಡ್‌ ವಿಲ್ಸನ್‌ನಅವರ ಸತತ32ವರ್ಷದಹೋರಾಟದ ಪರಿಣಾಮವಾಗಿ ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆಯನ್ನು 1993ರಲ್ಲಿ ದೇಶದ ಸಂಸತ್ತು ಅಂಗೀಕರಿಸಿತು.

2013ರಲ್ಲಿ ಮಲ ಹೊರುವ ಪದ್ಧತಿ ನಿಷೇಧ: ಈ ಮಧ್ಯೆ ಸಫಾಯಿ ಕರ್ಮಚಾರಿಗಳು ಮತ್ತು ಮಲ ಹೊರುವವರ ಜೀವನ ಮಟ್ಟ ಹಾಗೂ ಕೆಲಸದ ಸ್ಥಿತಿಗತಿಗಳ ಅಧ್ಯಯನ ನಡೆಸಿ ಶಿಫಾರಸು ಮಾಡಲು 1976ರಲ್ಲಿ ನೇಮಕ ಮಾಡಲಾದ ಐ.ಪಿ.ಡಿ ಸಾಲಪ್ಪ ಸಮಿತಿ ಸೇರಿದಂತೆ ವಿವಿಧಸಮಿತಿಗಳ ವರದಿ, ಹೈಕೋರ್ಟ್‌ನ ತೀರ್ಪಿನ ಬಳಿಕ 2013ರಲ್ಲಿ ರಾಜ್ಯ ಸರ್ಕಾರ “ಮಲಹೊರುವ ಪದ್ಧತಿ ನಿಷೇಧ (ಮ್ಯಾನ್ಯುಯಲ್‌ ಸ್ಕ್ಯಾವೆಂಜಿಂಗ್‌)ಕಾಯ್ದೆಯನ್ನು ಜಾರಿಗೆ ತಂದಿತು. ಆದರೆ, ಇದೆಲ್ಲದ ಅಣಕವೆಂಬಂತೆ ರಾಜ್ಯದಲ್ಲಿ

ಮಲ ಹೊರುವ ಪದ್ಧತಿ ನಿಂತಿಲ್ಲ. ರಾಜಧಾನಿ ಬೆಂಗಳೂರಿನಲ್ಲಂತೂ ಇದು ಎಗ್ಗಿಲ್ಲದೆ ಸಾಗಿದೆ. ಯಂತ್ರಗಳಿದ್ದರೂ ಬಳಸದ ಜನತೆ: ಮಲ ಬಾಚಲು, ಶೌಚ ಗುಂಡಿಗಳನ್ನು ಸ್ವತ್ಛಗೊಳಿಸಲು ಮನುಷ್ಯರನ್ನು ಬಳಸಿಕೊಳ್ಳುವುದು ನಿಷಿದ್ಧ, ಮನುಷ್ಯರ ಬದಲಿಗೆ ಯಂತ್ರಗಳನ್ನು ಬಳಸಿಕೊಳ್ಳಬೇಕು ಎಂದು ಕಾಯ್ದೆ ಹೇಳಿದ್ದರೂ, ಆಧುನಿಕ ತಂತ್ರ ಜ್ಞಾನಗಳ ಬೆಳವಣಿಗೆ ಮತ್ತು ಬಳಕೆಯಲ್ಲಿ ಮುಂಚೂಣಿಯಲ್ಲಿರುವ ರಾಜಧಾನಿ ಬೆಂಗಳೂರಿನಲ್ಲಿ “ಮ್ಯಾನ್‌ಹೋಲ್‌, ಒಳಚರಂಡಿಗಳು, ಸೆಪ್ಟಿಕ್‌ ಟ್ಯಾಂಕ್‌ಗಳು, ತೆರೆದ ಚರಂಡಿಗಳು, ಎಸ್‌ಟಿಪಿಗಳಲ್ಲಿ ಖುದ್ದು ಮನುಷ್ಯರು ಇಳಿದು ಕೆಲಸ ಮಾಡುತ್ತಿದ್ದಾರೆ. ಯಾವುದೇ ಸುರಕ್ಷತಾ ಉಪಕರಣಗಳಿಲ್ಲದೆ ಬರಿಗೈ, ಬರಿಮೈಯಲ್ಲಿ ಮನುಷ್ಯರು ಮತ್ತೂಬ್ಬ ಮನುಷ್ಯರ ಮಲ ಹೊರುತ್ತಿದ್ದಾರೆ.

ಪರಿಹಾರ ಮರೀಚಿಕೆ: ಶಿಕ್ಷೆ ಪ್ರಮಾಣ ಶೂನ್ಯ: ಮ್ಯಾನ್‌ಹೋಲ್‌ಗ‌ಳಲ್ಲಿ ಇಳಿದು ಕೆಲಸ ಮಾಡುವಾಗ ಸಾವನ್ನಪ್ಪಿದ್ದರೆ ಮೃತರ ಕುಟುಂಬದ ಸದಸ್ಯರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸುಪ್ರೀಂಕೋರ್ಟ್‌ 2018ರಲ್ಲಿ ಹೇಳಿದೆ. ಒಂದಿಷ್ಟು ಪ್ರಕರಣಗಳಲ್ಲಿ ಪರಿಹಾರ ನೀಡಲಾಗಿದ್ದರೂ, ಎಲ್ಲ ಮೃತರ ಕುಟುಂಬಗಳಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಸಿಕ್ಕಿಲ್ಲ. ಮನುಷ್ಯರನ್ನು ಮಲ ಹೊರುವ ಅಥವಾ ಶೌಚ ಗುಂಡಿ ಸ್ವಚ್ಛಗೊಳಿಸಲು ಬಳಸಿಕೊಂಡವರನ್ನು ಕಾನೂನು ರೀತಿ ಶಿಕ್ಷೆಗೊಳಪಡಿಸಬೇಕು. ಆದರೆ, ಈವರೆಗೆ ಒಬ್ಬಗರಿಗೂ ಶಿಕ್ಷೆಯಾಗಿಲ್ಲ.

Advertisement

ಸಮೀಕ್ಷೆಯೇ ನಡೆದಿಲ್ಲ: 2011ರ ಸಾಮಾಜಿಕ ಆರ್ಥಿಕ ಹಾಗೂ ಜಾತಿ ಗಣತಿ ಮಾಹಿತಿ ಪ್ರಕಾರ ರಾಜ್ಯದಲ್ಲಿ 15,375 ಮ್ಯಾನ್ಯುವಲ್‌ ಸ್ಕ್ಯಾವೆಂಜರ್ ಇದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 300 ಮಂದಿ ಮ್ಯಾನ್ಯುಯಲ್‌ ಸ್ಕ್ಯಾವೆಂಜರ್ ಇದ್ದಾರೆ ಎಂದು ಹೇಳಲಾಗಿದೆ. ಆದರೆ, ಬೆಂಗಳೂರೊಂದರಲ್ಲೇ 20 ಸಾವಿರ ಮ್ಯಾನ್ಯುಯಲ್‌ ಸ್ಕ್ಯಾವೆಂಜರ್ಸ್ ಗಳಿದ್ದಾರೆ ಎಂದು ಹೇಳಲಾಗಿದೆ. ಈವರೆಗೆ ರಾಜ್ಯದಲ್ಲಿ ಮ್ಯಾನ್ಯುಯಲ್‌ ಸ್ಕ್ಯಾವೆಂಜರ್ಗಳನ್ನು ಗುರುತಿಸಲು ನಿಖರವಾದ ಸಮೀಕ್ಷೆಯೇ ನಡೆದಿಲ್ಲ. 2018ರಲ್ಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ನಡೆಸಿದೆ ಸಮೀಕ್ಷೆ 1,700 ಮ್ಯಾನ್ಯುಯಲ್‌ ಸ್ಕ್ಯಾವೆಂಜರ್ಗಳನ್ನು ಗುರುತಿಸ ಲಾಗಿತ್ತು. ಈ ರೀತಿಯ ಗೊಂದಲಗಳಿಂದಾಗಿ ಕಾಯ್ದೆ ಜಾರಿ, ಪರಿಹಾರ ಮತ್ತಿತರರ ವಿಷಯಗಳಿಗೆ ಸ್ಪಷ್ಟ ರೂಪ ಸಿಗುತ್ತಿಲ್ಲ ಎಂದು ಹೇಳಲಾಗಿದೆ.

88 ಸಾವು; ರಾಜಧಾನಿಯಲ್ಲೇ ಹೆಚ್ಚು :  ಮ್ಯಾನ್‌ಹೋಲ್‌, ಶೌಚಗುಂಡಿಗಳಿಗೆ ಇಳಿದು ವಿಷಯುಕ್ತ ಅನಿಲ ಸೇವಿಸಿ ಅಮಾಯಕಕಾರ್ಮಿಕರು ಅಮಾನವೀಯವಾಗಿ ಸಾವನ್ನಪ್ಪಿದ ಅನೇಕ ಘಟನೆಗಳು ನಡೆದಿದೆ.1993ರಿಂದ2020ರ ಜೂನ್‌ವರೆಗೆ ರಾಜ್ಯದಲ್ಲಿ ಇಂತಹ50ಕ್ಕೂ ಹೆಚ್ಚು ಘಟನೆಗಳು ನಡೆದು88 ರಿಂದ90 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ಬೆಂಗಳೂರಲ್ಲೇ60ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಉಳಿದಂತೆ ಮೈಸೂರು, ಶಿವಮೊಗ್ಗ, ವಿಜಯಪುರ, ಹುಬ್ಬಳ್ಳಿ-ಧಾರವಾಡ, ಚಿಕ್ಕಬಳ್ಳಾಪುರ, ಉತ್ತರಕನ್ನಡ, ತುಮಕೂರು, ಹಾಸನ, ದಕ್ಷಿಣ ಕನ್ನಡ ಮತ್ತಿತರರ ಜಿಲ್ಲೆಗಳಲ್ಲಿ ಸಾವುಗಳು ಸಂಭವಿಸಿದೆ.

“ಈಗಷ್ಟೇ ಅಧಿಕಾರವಹಿಸಿಕೊಂಡಿದ್ದೇನೆ. ಮಲ ಹೊರುವ ಪದ್ಧತಿ ನಿಷೇಧಿಸಲ್ಪಟ್ಟಿದ್ದರೂ ಬೇರೆ-ಬೇರೆ ರೂಪಗಳಲ್ಲಿ ಅದು ಇನ್ನು ಜಾರಿಯಲ್ಲಿದೆ. ಮಲ ಹೊರುವ ಪದ್ಧತಿ ನಿಷೇಧಕಾಯ್ದೆಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವನಿಟ್ಟಿನಲ್ಲಿ ಎಲ್ಲಾ ರೀತಿಯಕ್ರಮಗಳನ್ನು ಕೈಗೊಳ್ಳಲಾಗುವುದು. ಮ್ಯಾನ್ಯುಯಲ್‌ ಸ್ಕ್ಯಾವೆಂಜರ್ಗಳ ಸಮೀಕ್ಷೆ ನಡೆಸುವ ಬಗ್ಗೆಯೂ ಮುಂದಿನ ದಿನಗಳಲ್ಲಿಕ್ರಮ ಕೈಗೊಳ್ಳಲಾಗುವುದು”. ಎಂ. ಶಿವಣ್ಣ, ಅಧ್ಯಕ್ಷರು, ರಾಜ್ಯ ಸಫಾಯಿ ಕರ್ಮಚಾರಿ ಆಯೋಗ.

 

-ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next