Advertisement

ಕೋವಿಡ್‌ ವಾರಿಯರ್ಗೆ ಒಲಿಂಪಿಕ್ಸ್‌ ಪದಕ ಅರ್ಪಣೆ: ಮನ್‌ಪ್ರೀತ್‌ ಗುರಿ

01:49 AM Jun 15, 2021 | Team Udayavani |

ಬೆಂಗಳೂರು : ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಹಾಕಿ ಪದಕವೊಂದನ್ನು ಗೆದ್ದು ಇದನ್ನು ಕೋವಿಡ್‌ ವಾರಿಯರ್ಗೆ ಅರ್ಪಿಸಬೇಕು ಎಂಬುದಾಗಿ ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ ಹೇಳಿದ್ದಾರೆ.

Advertisement

“ಟೋಕಿಯೊ ಒಲಿಂಪಿಕ್ಸ್‌ಗಾಗಿ ನಾವು ಭರದ ಸಿದ್ಧತೆ ಮಾಡುತ್ತಿದ್ದೇವೆ. ನಮ್ಮ ಗುರಿ ಪೋಡಿಯಂ ಮೇಲೇರಿ ನಿಲ್ಲುವುದು ಹಾಗೂ ಈ ಪದಕವನ್ನು ಕೋವಿಡ್‌ ವಿರುದ್ಧ ಹೋರಾಡಿದ ನಿಜವಾದ ಹೀರೋಗಳಾದ ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬಂದಿಗೆ ಅರ್ಪಿ ಸುವುದು. ದೇಶವನ್ನು ಈ ಮಹಾ ಮಾರಿಯಿಂದ ಬಚಾವ್‌ ಮಾಡು ವಲ್ಲಿ ಇವರು ವಹಿಸಿದ ಶ್ರಮಕ್ಕೆ ಬೆಲೆ ಕಟ್ಟಲಾಗದು. ಥ್ಯಾಂಕ್ಯೂ, ಜೈ ಹಿಂದ್‌’ ಎಂದು ಹೇಳಿರುವ ಮನ್‌ಪ್ರೀತ್‌ ಸಿಂಗ್‌ ಅವರ ವೀಡಿಯೋವನ್ನು “ಹಾಕಿ ಇಂಡಿಯಾ’ ಬಿಡುಗಡೆ ಮಾಡಿದೆ.

ಬೆಂಗಳೂರಿನಲ್ಲಿ ಅಭ್ಯಾಸ
ಹಾಕಿಪಟುಗಳೆಲ್ಲ ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಕಠಿನ ಅಭ್ಯಾಸ ನಡೆಸುತ್ತಿದ್ದಾರೆ. ಎಲ್ಲರೂ ಗರಿಷ್ಠ ಸಾಮರ್ಥ್ಯದೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಲು ಕಾತರರಾಗಿದ್ದಾರೆ ಎಂದು ಮನ್‌ಪ್ರೀತ್‌ ಹೇಳಿದರು.

ಭಾರತ ಈ ವರೆಗೆ ಒಲಿಂಪಿಕ್ಸ್‌ ಹಾಕಿಯಲ್ಲಿ 8 ಚಿನ್ನದ ಪದಕ ಗೆದ್ದಿದೆ. ಆದರೆ 1980ರ ಬಳಿಕ ಬಂಗಾರದ ಬರಗಾಲ ಎದುರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next