Advertisement

ಹರ್ಯಾಣದಲ್ಲಿಂದು ಖಟ್ಟರ್ ಪಟ್ಟಾಭಿಷೇಕ; ಡಿಸಿಎಂ ಹುದ್ದೆಗೆ ಚೌಟಾಲ

10:00 AM Oct 28, 2019 | Team Udayavani |

ಚಂಡೀಗಢ: ಹರ್ಯಾಣದಲ್ಲಿ ಇಂದು ಮನೋಹರಲಾಲ್ ಖಟ್ಟರ್ ಮತ್ತೆ ಮುಖ್ಯಮಂತ್ರಿಯಾಗಿ ಇಂದು ಪ್ರಮಾನ ವಚನ ಸ್ವೀಕರಿಸಲಿದ್ದಾರೆ. ಇವರೊಂದಿಗೆ ಉಪ ಮುಖ್ಯಮಂತ್ರಿಯಾಗಿ ದುಷ್ಯಂತ್ ಚೌಟಾಲಾ ಅಧಿಕಾರ ಸ್ವೀಕರಿಸಲಿದ್ದಾರೆ.

Advertisement

ಇಂದು ಮಧ್ಯಾಹ್ನ 2.15ಕ್ಕೆ ರಾಜಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಸತ್ಯದೇವ್ ನಾರಾಯಣ ಆರ್ಯ ಪ್ರಮಾಣ ವಚನ ಭೋಧಿಸಲಿದ್ದಾರೆ.

ಬಿಜೆಪಿ- ಜೆಜೆಪಿ ಮೈತ್ರಿಯಲ್ಲಿ ಇದೇ ಮೊದಲ ಬಾರಿಗೆ ಹರ್ಯಾಣದಲ್ಲಿ ಸರಕಾರ ರಚನೆಯಾಗುತ್ತಿದೆ.

ಮನೋಹರ ಲಾಲ್ ಖಟ್ಟರ್ ಸತತ ಎರಡನೇ ಬಾರಿಗೆ ಹರ್ಯಾಣದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಮೊದಲ ಅವಧಿಯಲ್ಲಿ ಪೂರ್ಣ ಬಹುಮತದೊಂದಿಗೆ ಮುಖ್ಯಮಂತ್ರಿಯಾಗಿದ್ದರೆ, ಈ ಬಾರಿ ಮೈತ್ರಿ ಸರಕಾರದ ನೇತೃತ್ವ ವಹಿಸಲಿದ್ದಾರೆ.

ದುಷ್ಯಂತ್ ಚೌಟಾಲ ಕಳೆದ ವರ್ಷವಷ್ಟೇ ಜೆಜೆಪಿ ಪಕ್ಷ ಕಟ್ಟಿ ಈ ವಿಧಾನಸಭಾ ಚುನಾವಣೆಯಲ್ಲಿ 10 ಸ್ಥಾನಗಳನ್ನು ಗೆದ್ದು ಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next