Advertisement

ಡಾ.ಮನಮೋಹನ್‌ ಸಿಂಗ್‌ ಅಮೃತಸರದಿಂದ ಸ್ಪರ್ಧಿಸುವುದಿಲ್ಲ: CM ಅಮರೀಂದರ್‌

02:05 PM Mar 12, 2019 | udayavani editorial |

ಚಂಡೀಗಢ : ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರನ್ನು ಕಾಂಗ್ರೆಸ್‌ ಪಕ್ಷ ಲೋಕಸಭೆ ಚುನಾವಣೆಗಾಗಿ ಅಮೃತಸರದಿಂದ ಕಣಕ್ಕಿಳಿಸಲಿದೆ ಎಂಬ ಮಾಧ್ಯಮ ವರದಿಯನ್ನು ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ತಿರಸ್ಕರಿಸಿದ್ದಾರೆ. ಡಾ. ಸಿಂಗ್‌ ಅವರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ  ಎಂದವರು ಹೇಳಿದ್ದಾರೆ. 

Advertisement

ಪಂಜಾಬ್‌ ನಲ್ಲಿ ಆಮ್‌ ಆದ್ಮಿ ಪಕ್ಷದೊಂದಿಗೆ ಅಥವಾ ಬೇರೆ ಯಾವುದೇ ಪಕ್ಷದೊಂದಿಗೆ ಚುನಾವಣಾ ಮೈತ್ರಿ  ಹೊಂದುವುದಿಲ್ಲ; ಪಂಜಾಬ್‌ ನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಯಾವುದೇ ಪಕ್ಷದೊಂದಿಗಿನ ಮೈತ್ರಿಯ ಅಗತ್ಯವೇ ಇಲ್ಲ  ಎಂದು 77ರ ಹರೆಯದ ಅಮರೀಂದರ್‌ ಸಿಂಗ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next