Advertisement

Assembly session ಸಭಾಪತಿ ಸ್ಥಾನದಲ್ಲಿ ಆಸೀನರಾದ ಮಂಜುನಾಥ ಭಂಡಾರಿ

09:59 PM Dec 11, 2023 | Team Udayavani |

ಸುವರ್ಣ ವಿಧಾನಸೌಧ: ವಿಧಾನಪರಿಷತ್‌ ಕಾಂಗ್ರೆಸ್‌ ಸದಸ್ಯ ಮಂಜುನಾಥ ಭಂಡಾರಿ ಅವರು ಸೋಮವಾರದ ಕಲಾಪದಲ್ಲಿ ಕೆಲ ಕಾಲ ಸಭಾಪತಿ ಸ್ಥಾನದಲ್ಲಿ ಆಸೀನರಾಗಿ ಸದನ ನಡೆಸಿಕೊಟ್ಟರು.

Advertisement

ಸಭಾಪತಿ ಬಸವರಾಜ ಹೊರಟ್ಟಿ ಅವರ ಅನುಪಸ್ಥಿತಿಯಲ್ಲಿ ಉಪ ಸಭಾಪತಿ ಪ್ರಾಣೇಶ ಅವರು ಸೋಮವಾರ ಸದನ ನಡೆಸಿದ್ದರು. ನಿಯಮ 68ರ ಮೇಲೆ ಬರದ ಕುರಿತು ಚರ್ಚೆಗೆ ಅವಕಾಶ ನೀಡಿದ ಉಪ ಸಭಾಪತಿಯವರು, ಮಂಜುನಾಥ ಭಂಡಾರಿ ಅವರನ್ನು ಕರೆದು, ಕೆಲ ಕಾಲ ಸದನ ಮುಂದುವರೆಸಿ ನಾನು ಮತ್ತೆ ಬರುವೆ ಎಂದು ಹೇಳಿ ಹೊರಹೋದರು.

ಮಂಜುನಾಥ ಭಂಡಾರಿಯವರು ಕೆಲ ಕಾಲ ಪೀಠದಲ್ಲಿ ಆಸೀನರಾಗಿ ಸದನ ನಡೆಸಿದರಲ್ಲದೆ, ಅನಂತರ ಉಪ ಸಭಾಪತಿಯವರು ಆಗಮಿಸಿದ್ದರಿಂದ ಅವರು ಪೀಠದಿಂದ ನಿರ್ಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next