Advertisement

ಮಂಜು ಮಾಂಡವ್ಯ ಹೊಸ ಚಿತ್ರಕ್ಕೆ ಚಾಲನೆ

11:05 AM Jan 03, 2018 | |

ಯಶ್‌ ಅಭಿನಯದ “ಮಾಸ್ಟರ್‌ ಪೀಸ್‌’ ನಿರ್ದೇಶಿಸಿದ್ದ ಮಂಜು ಮಾಂಡವ್ಯ ಅವರು ಈ ಹಿಂದೆ ಉಪೇಂದ್ರ ಚಿತ್ರವನ್ನು ನಿರ್ದೇಶಿಸುವುದಾಗಿ ಹೇಳಿಕೊಂಡಿದ್ದರು. ಆದರೆ, ಉಪೇಂದ್ರ ಅವರು ರಾಜಕೀಯ ಪ್ರವೇಶಿಸಿದರು. ಅಲ್ಲಿಗೆ ಮಂಜು ಮಾಂಡವ್ಯ ಅವರ ಸಿನಿಮಾಗೂ ಬ್ರೇಕ್‌ ಬಿತ್ತು. ಆ ಬಳಿಕ ಮಂಜು ಮಾಂಡವ್ಯ ಏನು ಮಾಡುತ್ತಿದ್ದರು? ಅವರೇ ಹೇಳುವಂತೆ ಹೊಸದೊಂದು ಕಥೆ ಹೆಣೆಯೋಕೆ ಕುಳಿತಿದ್ದರು.

Advertisement

ಈಗ ಆ ಕಥೆ ರೆಡಿಯಾಗಿದ್ದು, ಹೊಸ ಚಿತ್ರಕ್ಕೂ ಅಣಿಯಾಗಿದ್ದಾರೆ ಮಂಜು ಮಾಂಡವ್ಯ. ಇತ್ತೀಚೆಗೆ ಚಿತ್ರದ ಹಾಡುಗಳ ರಾಗ ಸಂಯೋಜನೆಗೆ ಚಾಲನೆಯೂ ಸಿಕ್ಕಿದೆ. ಮಣಿಕಾಂತ್‌ ಕದ್ರಿ ಅವರು ರಾಗ ಚಾಲನೆ ಮಾಡುವ ಮೂಲಕ ಚಿತ್ರದ ಕೆಲಸಕ್ಕೆ ಚಾಲನೆ ಕೊಟ್ಟಿದ್ದಾರೆ. ಸದ್ಯಕ್ಕೆ ಮಂಜು ಮಾಂಡವ್ಯ ಅವರ ಹೊಸ ಚಿತ್ರಕ್ಕೆ ನಾಯಕ ಯಾರು, ಅವರಿಗೆ ಯಾರು ನಾಯಕಿ, ಯಾರೆಲ್ಲಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಕ್ಯಾಮೆರಾ ಯಾರು ಹಿಡಿಯುತ್ತಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರವಿಲ್ಲ. ಚಿತ್ರಕ್ಕೆ ಶೀರ್ಷಿಕೆಯೂ ಪಕ್ಕಾ ಆಗಿಲ್ಲ. ಈಗಷ್ಟೇ ಸಂಗೀತದ ಕೆಲಸ ಶುರುವಾಗಿದ್ದು ಬಿಟ್ಟರೆ, ಬೇರೇನೂ ಅಂತಿಮವಾಗಿಲ್ಲ ಎಂಬುದು ಮಂಜುಮಾಂಡವ್ಯ ಅವರ ಮಾತು. ಹಾಗಾದರೆ, ಈ ಚಿತ್ರದಲ್ಲಿ ಸ್ಟಾರ್‌ ನಟ ಇರುತ್ತಾರಾ? ಗೊತ್ತಿಲ್ಲ. ಯಾರೆಲ್ಲಾ ನಟಿಸುತ್ತಿದ್ದಾರೆ ಅದೂ ಗೊತ್ತಿಲ್ಲ.

ಅವೆಲ್ಲದ್ದಕ್ಕೂ ಉತ್ತರ ಸಿಗಬೇಕಾದರೆ, ಇನ್ನೂ ಹತ್ತು ದಿನಗಳು ಬೇಕು. ಅಲ್ಲಿಯವರೆಗೆ ಎಲ್ಲವೂ ಗೌಪ್ಯ ಎಂದಷ್ಟೇ ಹೇಳುತ್ತಾರೆ ಮಂಜು ಮಾಂಡವ್ಯ. ಹಾಗಾದರೆ, ಈ ಚಿತ್ರಕ್ಕೆ ಯಾವಾಗ ಚಾಲನೆ ಸಿಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮಾರ್ಚ್‌ ಹೊತ್ತಿಗೆ ಮಂಜು ಮಾಂಡವ್ಯ ಅವರ ಹೊಸ ಚಿತ್ರ ಸೆಟ್ಟೇರಲಿದೆ.

ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಮಂಜು ಮಾಂಡವ್ಯ, ಐಶ್ವರ್ಯ ಫಿಲ್ಮ್ ಪ್ರೊಡಕ್ಷನ್‌ನಲ್ಲಿ ಚಿತ್ರ ಮಾಡುತ್ತಿದ್ದಾರೆ. ಇದೊಂದು ಎಲ್ಲಾ ಪ್ಯಾಕೇಜ್‌ ಇರುವಂತಹ ಅಪ್ಪಟ ಮನರಂಜನೆಯ ಚಿತ್ರ ಆಗಿರುತ್ತೆ ಎಂದಷ್ಟೇ ಹೇಳುವ ಮಂಜು ಮಾಂಡವ್ಯ, ಚಿತ್ರದಲ್ಲಿ ಐದು ಹಾಡುಗಳಿದ್ದು, ಮೂರು ಹಂತದಲ್ಲಿ ಚಿತ್ರೀಕರಣ ಮಾಡುವ ಯೋಚನೆಯಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next