Advertisement

Manjeshwar ಎಸ್‌ಐಗೆ ಹಲ್ಲೆ ಪ್ರಕರಣ: ಜಿ.ಪಂ. ಸದಸ್ಯನ ಬಂಧನ

06:51 PM Sep 05, 2023 | Team Udayavani |

ಮಂಜೇಶ್ವರ: ರಾತ್ರಿ ಹೊತ್ತಿನಲ್ಲಿ ಗಸ್ತು ತಿರುಗುತ್ತಿದ್ದ ಎಸ್‌ಐಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮುಸ್ಲಿಂ ಯೂತ್‌ ಲೀಗ್‌ ಜಿಲ್ಲಾ ಜತೆ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್‌ ಸದಸ್ಯ ಗೋಲ್ಡನ್‌ ಅಬ್ದುಲ್‌ ರಹಿಮಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಶೀದ್‌, ಅಫÕಲ್‌ ಸಹಿತ ನಾಲ್ವರನ್ನು ಬಂಧಿಸಲು ಬಾಕಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆ. 3ರಂದು ಮುಂಜಾನೆ ಉಪ್ಪಳ ಹಿದಾಯತ್‌ ನಗರದಲ್ಲಿ ಗಸ್ತು ನಡೆಸುತ್ತಿದ್ದ ಎಸ್‌ಐ ಬಿ. ಅನೂಪ್‌, ಸೀನಿಯರ್‌ ಸಿವಿಲ್‌ ಪೊಲೀಸ್‌ ಆಫೀಸರ್‌ ಕಿಶೋರ್‌ ಅವರಿಗೆ ತಂಡವೊಂದು ಹಲ್ಲೆ ಮಾಡಿದ್ದಾಗಿ ಪೊಲೀಸರು ಕೇಸು ದಾಖಲಿಸಿದ್ದರು. ಹಿದಾಯತ್‌ನಗರದಲ್ಲಿ ಗುಂಪುಗೂಡಿ ನಿಂತಿರುವ ಜನರನ್ನು ಚದುರಿಸಲು ಪ್ರಯತ್ನಿಸಿದಾಗ ಪೊಲೀಸರಿಗೆ ಹಲ್ಲೆ ಮಾಡಲಾಗಿದೆ.

ಘಟನೆಗೆ ಸಂಬಂಧಿಸಿ ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿ, ಹಲ್ಲೆಗೈದು ಗಂಭೀರ ಗಾಯಗೊಳಿಸಿದ್ದು ಮೊದಲಾದ ಜಾಮೀನು ರಹಿತ ಕಾಯ್ದೆಗಳನ್ನು ಹೇರಿ ಐವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದರು. ಇದೇ ವೇಳೆ ತಾನು ಸ್ಥಳದಲ್ಲಿರಲಿಲ್ಲವೆಂದೂ, ಪೊಲೀಸರಿಗೆ ಹಲ್ಲೆ ಮಾಡಿಲ್ಲವೆಂದೂ ಅಬ್ದುಲ್‌ ರಹಿಮಾನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next