Advertisement

ಮಾರ್ಚ್ 20ರವರೆಗೆ ನ್ಯಾಯಾಂಗ ಬಂಧನ; ಸಿಸೋಡಿಯಾ ತಿಹಾರ್ ಜೈಲಿಗೆ

03:33 PM Mar 06, 2023 | Team Udayavani |

ನವದೆಹಲಿ : ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಮಾರ್ಚ್ 20ರವರೆಗೆ ನ್ಯಾಯಾಂಗ ಬಂಧನಕ್ಕೆ ಸೋಮವಾರ ರೌಸ್ ಅವೆನ್ಯೂ ಕೋರ್ಟ್ ಕಳುಹಿಸಿದೆ. ಸಿಸೋಡಿಯಾ ಅವರನ್ನು ತಿಹಾರ್ ಜೈಲಿಗೆ ಕರೆದೊಯ್ಯಲಾಗಿದೆ.

Advertisement

ಸಿಬಿಐ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸಿಸೋಡಿಯಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಶನಿವಾರ ದೆಹಲಿ ನ್ಯಾಯಾಲಯವು ಅವರ ಸಿಬಿಐ ಕಸ್ಟಡಿಯನ್ನು ಮಾರ್ಚ್ 6 ರವರೆಗೆ ಕೇಂದ್ರೀಯ ಸಂಸ್ಥೆಯ ಕೋರಿಕೆಯಂತೆ ವಿಸ್ತರಿಸಿತ್ತು.

ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಸಿಬಿಐ ತನಿಖೆಗೆ ಕರೆ ನೀಡಿದ ನಂತರ ರದ್ದುಪಡಿಸಿದ ದೆಹಲಿ ಮದ್ಯ ನೀತಿಯಲ್ಲಿ ಸಿಸೋಡಿಯಾ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ. ಸರಕಾರ ನಿಯಮಗಳನ್ನು ಬಗ್ಗಿಸಿ ಮದ್ಯದಂಗಡಿ ಮಾಲೀಕರಿಗೆ ಅನಪೇಕ್ಷಿತ ಲಾಭ ಒದಗಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಸಿಸೋಡಿಯಾ ಅವರ ವಿರುದ್ಧ ಮಾಡಿರುವ ಆಧಾರರಹಿತ ಆರೋಪಗಳನ್ನು ಒಪ್ಪಿಕೊಳ್ಳಲು ಸಿಬಿಐ ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next