Advertisement

Manipur ಅಫೀಮು, ವಲಸಿಗರ ಕುಮ್ಮಕ್ಕಿನಲ್ಲಿ ದಾಳಿ

10:57 PM Aug 18, 2023 | Team Udayavani |

ಮಂಗಳೂರು: ಮೈತೇಯಿ ಸಮುದಾಯದ ಮೇಲೆ ಕುಕಿಗಳು ನಿರಂತರ ಹಲ್ಲೆ, ಅತ್ಯಾಚಾರ ನಡೆಸು ತ್ತಿದ್ದಾರೆ, ಇನ್ನೊಂದೆಡೆ ಮಣಿಪುರದ ಗುಡ್ಡಗಾಡು ಪ್ರದೇಶವನ್ನು ಅಫೀಮಿಗೆ ಬೇಕಾಗುವ ಪೋಪ್ಪಿ ಎನ್ನುವ ಗಿಡ ಬೆಳೆಸುವುದಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಇದನ್ನು ವಿದೇಶಗಳಿಗೆ ಕಳ್ಳಸಾಗಾಟ ಮಾಡಲಾಗುತ್ತಿದೆ, ಯುವಜನತೆ ಅದಕ್ಕೆ ದಾಸರಾಗುತ್ತಿದ್ದಾರೆ ಎಂದು ಮಣಿಪುರದ ಪ್ರಥಮ ರಕ್ಷಾ ಮಂತ್ರಿ ಮೇಜರ್‌ ಮೋತಿಮಾಲಾ ಗ್ಯಾಂಗೋಮ್‌ ಹೇಳಿದರು.

Advertisement

ನಮೋ ಬ್ರಿಗೇಡ್‌ 2.0 ವತಿಯಿಂದ ಡೊಂಗರ ಕೇರಿಯಲ್ಲಿರುವ ಭುವನೇಂದ್ರ ಸಭಾಂಗಣದಲ್ಲಿ ನಡೆದ “ಮಣಿಪುರದ ಹಿಂದಿನ ಕಥೆ, ವಾಸ್ತವದ ವ್ಯಥೆ’ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಮೈತೇಯಿ ಸಮುದಾಯದ ಸಂಪ್ರದಾಯ ಮತ್ತು ಸಂಸ್ಕೃತಿಗಳ ಮೇಲೆ ಕೂಡ ದಾಳಿ ಮಾಡಲಾ ಗುತ್ತಿದೆ. ಮಣಿಪುರವು ಮ್ಯಾನ್ಮಾರ್‌ ದೇಶ ದೊಂದಿಗೆ ಗಡಿ ಹಂಚಿಕೊಂಡಿದೆ. ಅಲ್ಲಿನವರೂ ಸುಲಭವಾಗಿ ಗಡಿ ಯೊಳಗೆ ಅತಿಕ್ರಮಣ ಮಾಡಿ ಬಂದು ಕುಕಿಗಳ ಜತೆ ಸೇರಿ ಮಣಿಪುರದ ಮೂಲ ನಿವಾಸಿಗಳಾದ ಮೈತೇಯಿಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದರು.

ವಿದೇಶಿ ಮಾಧ್ಯಮಗಳಿಂದ ಏಕಮುಖಿ ಸುದ್ದಿ
ಮಣಿಪುರ ಸಂಸ್ಕೃತಿ ವಿದ್ಯಾಲಯದ ಕಲಾ ಅಕಾಡೆಮಿ ಯುವ ಪ್ರತಿಭಾ ಪ್ರಶಸ್ತಿ ಪುರಸ್ಕೃತೆ ಡಾ|ಊರ್ಮಿಕಾ ಮಯ್ಬಾಮಾ ಅವರು ಮಾತನಾಡಿ ಮೈತೇಯಿ ಸಮುದಾಯದ ಬಳಿ ಹಣ, ಸಂಪತ್ತು ಇಲ್ಲ. 2011ರ ಜನಗಣತಿ ಆಧಾರದಲ್ಲಿ 30 ಲಕ್ಷ ಜನಸಂಖ್ಯೆ ಇತ್ತು. ಹತ್ತು ವರ್ಷಗಳಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಕುಕಿ ಸಮುದಾಯ ದವರು ದೊಡ್ಡ ಸಂಖ್ಯೆಯಲ್ಲಿ ವಲಸೆ ಬಂದಿದ್ದಾರೆ ಎಂದರು.

ಮೇ 3ರ ಮೊದಲೇ ಅಂತಾರಾಷ್ಟ್ರೀಯ ವರದಿಗಾರರು ಆಗಮಿಸಿದ್ದರು. ಮೊದಲೇ ಸರಕಾರಿ ಹುದ್ದೆಯಲ್ಲಿರುವ ಕುಕಿ ಅಧಿಕಾರಿಗಳು ರಜೆ ಮೇಲೆ ಹೋಗಿದ್ದಾರೆ. 10 ಕುಕಿ ಶಾಸಕರೂ ಮಿಜಾರಾಂಗೆ ಹೋಗಿ ಸೇರಿಕೊಂಡಿದ್ದರು. ಈ ಮೂಲಕ ಮೇ 3ರಂದು ನಡೆದ ಘಟನೆ, ಮೈತೇಯಿಗಳ ಮೇಲೆ ನಡೆದ ಹಲ್ಲೆ, ಸುವ್ಯವಸ್ಥಿತವಾಗಿ ರೂಪಿತವಾದದ್ದು, ಮಾಧ್ಯಮಗಳೂ ಏಕಪಕೀÒಯವಾಗಿ ವರದಿ ಮಾಡುತ್ತಿವೆ ಎಂದರು.

Advertisement

ಶೇ. 10ರಷ್ಟು ಬಯಲು ಪ್ರದೇಶದಲ್ಲಿ ಮಾತ್ರ ಮೈತೇಯಿಗಳು ಹಾಗೂ ಇತರ ಸಮುದಾಯ ನೆಲೆಸಿದ್ದರೆ ಮಣಿಪುರದ ಉಳಿದ ಶೇ. 90ರಷ್ಟು ಭೂಭಾಗವಾದ ಗುಡ್ಡಗಳಲ್ಲಿ ಕುಕಿಗಳಿದ್ದಾರೆ. ಭೂ ಸುಧಾರಣ ಕಾಯಿದೆಯ ಪ್ರಕಾರ ಮೈತೇಯಿಗಳು ಗುಡ್ಡಗಾಡು ಪ್ರದೇಶದಲ್ಲೆಲ್ಲೂ ನೆಲೆಸುವಂತಿಲ್ಲ, ಅಲ್ಲಿ ನೆಲೆಸಿದವರ ಮೇಲೆ ನಿರಂತರ ಹಲ್ಲೆ ನಡೆದಿದೆ ಎಂದರು.

ಭಾರತಿ ಸಂಜಯ್‌ ಪ್ರಭು ಸ್ವಾಗತಿಸಿ ಪ್ರಸ್ತಾವಿಸಿದರು. ಗೋಪಾಲಕೃಷ್ಣ ಭಟ್‌ ಪ್ರಾರ್ಥಿಸಿದರು. ಅರುಣ್‌ ಜಿ. ಶೇಟ್‌ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next