Advertisement

Manipur: ಒಪ್ಪಂದ ನಡೆದ ಬೆನ್ನಲ್ಲೇ ಮೈತೇಯಿ ಜನಾಂಗದ ಮನೆಗೆ ಬೆಂಕಿ

12:12 AM Aug 04, 2024 | Team Udayavani |

ಇಂಫಾಲ್‌: ಗಲಭೆಪೀಡಿತ ಮಣಿಪುರದಲ್ಲಿ ಶಾಂತಿ ದೂರದ ಮಾತಾಗಿದೆ. ಇಲ್ಲಿನ ಜಿರಿಬಾಮ್‌ ಜಿಲ್ಲೆಯಲ್ಲಿ ಮೈತೇಯಿ ಜನಾಂಗ ಮತ್ತು ಕುಕಿ ಬುಡಕಟ್ಟು ಜನಾಂಗದ ಭಾಗವಾದ ಮಾರ್‌ ಸಮೂಹದ ನಡುವೆ “ಶಾಂತಿ ಮಾತುಕತೆ’ ನಡೆದ ಮಾರನೇ ದಿನವೇ ಅಂದರೆ ಶುಕ್ರವಾರ ರಾತ್ರಿ ಮೈತೇಯಿ ಕುಟುಂಬದ ಮನೆಯೊಂದಕ್ಕೆ ಬೆಂಕಿ ಹಚ್ಚಲಾಗಿದೆ.

Advertisement

ಸೆಜಾಂಗ್‌ ಎಂಬ ಕುಕಿ ಬಾಹುಳ್ಯದ ಪ್ರದೇಶಕ್ಕೆ ಹತ್ತಿರವೇ ಇರುವ ಲಾಲ್‌ಪಾನಿ ಎಂಬ ಬೆಂಗಾಲಿ ಬಾಹುಳ್ಯದ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗುರುವಾರವಷ್ಟೇ ಜಿಲ್ಲೆಯೊಳಗೆ ಎರಡೂ ಸಮುದಾಯಗಳ ನಡುವೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ 9 ನಾಗರಿಕ ಸಂಸ್ಥೆಗಳ ನಾಯಕರು, ವಿವಿಧ ಜನಾಂಗಗಳ ಪ್ರತಿನಿಧಿಗಳು, ಜಿಲ್ಲಾಧಿಕಾರಿ, ಎಸ್‌ಪಿ, ಡಿಐಜಿ ಮತ್ತಿತರರು ಸೇರಿ ಶಾಂತಿ ಮಾತುಕತೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next