Advertisement

Manipal; ಉದಯವಾಣಿ ಎಂಐಸಿ ನಮ್ಮ ಸಂತೆಗೆ ಇಂದು ಚಾಲನೆ

12:54 AM Feb 24, 2024 | Team Udayavani |

ಮಣಿಪಾಲ: ಸ್ಥಳೀಯ ಮಾರುಕಟ್ಟೆಯನ್ನು ಉತ್ತೇಜಿಸಿ ಸ್ಥಳೀಯ ಆರ್ಥಿಕತೆಯನ್ನು ಬೆಂಬಲಿಸಲೆಂದು ಉದಯವಾಣಿ ದಿನಪತ್ರಿಕೆ ಮತ್ತು ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ಕಮ್ಯುನಿಕೇಶನ್‌ (ಎಂಐಸಿ) ಸಹಯೋಗದಲ್ಲಿ ಉದಯವಾಣಿ ಪ್ರಧಾನ ಕಚೇರಿ ಬಳಿಯ ಎಂಐಸಿ ಆವರಣದಲ್ಲಿ ಫೆ. 24 ಮತ್ತು 25ರಂದು “ನಮ್ಮ ಸಂತೆ’ ಹಮ್ಮಿಕೊಂಡಿದೆ.

Advertisement

ಶನಿವಾರ ಬೆಳಗ್ಗೆ 10 ಗಂಟೆಗೆ ಉದ್ಘಾಟನೆ ನೆರವೇರಲಿದೆ. ನಮ್ಮ ಸಂತೆಯಲ್ಲಿ ಸ್ವಸಹಾಯ ಗುಂಪುಗಳ, ಸ್ವ-ಉದ್ಯೋಗಿಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವು ಎರಡೂ ದಿನ ಬೆಳಗ್ಗೆ 10ರಿಂದ ರಾತ್ರಿ 8ರ ತನಕ ನಡೆಯಲಿದೆ.

ಸ್ಥಳೀಯ ಕರಕುಶಲ ಕರ್ಮಿಗಳು, ಮಹಿಳಾ ಸ್ವಸಹಾಯ ಸಂಘಗಳ ಉತ್ಪಾದಕ ಸದಸ್ಯೆಯರು, ವಿಶೇಷ ಚೇತನ ನವೋದ್ಯಮಿಗಳು, ಕೃಷಿ ಉದ್ಯಮಿಗಳು, ಸಾವಯವ ಉತ್ಪನ್ನಕಾರರು, ಕಾಷ್ಠ ಶಿಲ್ಪಿಗಳು, ಲೋಹ ಶಿಲ್ಪಿಗಳು, ಗುಡಿ ಕೈಗಾರಿಕೆ ಉದ್ಯಮಿಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next