Advertisement

Manipal; ಅಪಘಾತದಲ್ಲಿ ಮೆದುಳು ನಿಷ್ಕ್ರಿಯ: ಅಂಗಾಂಗ ದಾನ

01:21 AM Apr 12, 2024 | Team Udayavani |

ಮಣಿಪಾಲ: ರಸ್ತೆ ಅಪಘಾತಕ್ಕೆ ತುತ್ತಾಗಿ ಮಿದುಳು ನಿಷ್ಕ್ರಿಯಗೊಂಡ ಉಡುಪಿ ಜಿಲ್ಲೆಯ ಕೆಮ್ಮಣ್ಣು ನಿವಾಸಿ 46 ವರ್ಷದ ಜೋ ವಿಕ್ಟರ್‌ ಲೂಯಿಸ್‌ ಅವರ ಅಂಗಾಂಗಳನ್ನು ಅವರ ಕುಟುಂಬಿಕರ ಇಚ್ಛೆಯಂತೆ ದಾನ ಮಾಡಲಾಗಿದೆ.

Advertisement

ಲೂಯಿಸ್‌ ಅವರನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚೇತರಿಸಿಕೊಳ್ಳುವ ಲಕ್ಷಣ ಕಾಣಿಸದಿದ್ದಾಗ ಮಾನವ ಅಂಗಾಂಗ ಕಸಿ ಕಾಯಿದೆ 1994ರ ಪ್ರಕಾರ ಪರಿಣಿತ ವೈದ್ಯರ ಸಮಿತಿಯು ಅಧಿಕೃತವಾಗಿ ಬ್ರೆ„ನ್‌ ಡೆಡ್‌ ಎಂದು ಘೋಷಿಸಿತು.

ಅವರ ಯಕೃತ್ತನ್ನು ಮಂಗಳೂರು ಅಂಬೇಡ್ಕರ್‌ ಸರ್ಕಲ್‌ನ ಕೆಎಂಸಿ ಆಸ್ಪತ್ರೆಗೆ, 1 ಕಿಡ್ನಿಯನ್ನು ಮಂಗಳೂರಿನ ಯೇನಪೊಯ ಆಸ್ಪತ್ರೆಗೆ ಮತ್ತು 1 ಕಿಡ್ನಿಯನ್ನು ಮಂಗಳೂರಿನ ಇಂಡಿಯಾನಾ ಆಸ್ಪತ್ರೆಗೆ ಕಳುಹಿಸಲಾಯಿತು. 2 ಕಾರ್ನಿಯಾಗಳನ್ನು ಮತ್ತು ಚರ್ಮವನ್ನು ಮಣಿಪಾಲದಲ್ಲಿನ ನೋಂದಾಯಿತ ರೋಗಿಗಳಿಗೆ ಬಳಸಲು ಉಳಿಸಿಕೊಳ್ಳಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next