Advertisement

ಮಣಿಪಾಲ ವಿದ್ಯಾರ್ಥಿಗಳಿಗೆ ನೆರೆ ತಡೆ

01:53 AM Aug 10, 2019 | mahesh |

ಉಡುಪಿ: ಮಣಿಪಾಲ ಮಾಹೆಯ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನ 40 ಮಂದಿ ವಿದ್ಯಾರ್ಥಿಗಳು ಬಾದಾಮಿ ಸಮೀಪದ ಹೊಸೂರಿನಲ್ಲಿ ನೆರೆಯಲ್ಲಿ ಸಿಲುಕಿ ಪಾರಾಗಿರುವ ಘಟನೆ ಸಂಭವಿಸಿದೆ.

Advertisement

ಅಧ್ಯಯನ ಪ್ರವಾಸಕ್ಕಾಗಿ ಸೋಮವಾರ ಬೆಂಗಳೂರಿಗೆ ತೆರಳಿ ಅಲ್ಲಿಂದ ಶುಕ್ರವಾರ ಮುಂಜಾವ 5 ಗಂಟೆಯ ಸುಮಾರಿಗೆ ಹುಬ್ಬಳ್ಳಿ ಕಡೆಗೆ ಹೊರಟಿದ್ದ 40 ವಿದ್ಯಾರ್ಥಿಗಳು ಹಾಗೂ ಇಬ್ಬರು ಪ್ರಾಧ್ಯಾಪಕರ ತಂಡವಿದ್ದ ಖಾಸಗಿ ಬಸ್‌ ಬಾದಾಮಿಯಿಂದ 20 ಕಿ.ಮೀ ದೂರದ ಹೊಸೂರು ತಲುಪುತ್ತಿದ್ದಾಗ ದಿಢೀರ್‌ ಸುರಿದ ಭಾರೀ ಮಳೆಯಿಂದ ನೆರೆಯುಂಟಾಗಿ ಬಸ್‌ ಮುಂದಕ್ಕೆ ಚಲಿಸಲು ಅಸಾಧ್ಯವಾಯಿತು. ಅನಂತರ ವಿದ್ಯಾರ್ಥಿಗಳು ಬೇರೆ ಬಸ್‌ನಲ್ಲಿ ಹುಬ್ಬಳ್ಳಿ ತಲುಪಿದ್ದಾರೆ.

ಸುರಕ್ಷಿತ: ವಿದ್ಯಾರ್ಥಿಗಳೆಲ್ಲರೂ ಸುರಕ್ಷಿತರಾಗಿದ್ದಾರೆ. ಈ ಬಗ್ಗೆ ಈಗಾಗಲೇ ಮಕ್ಕಳ ಪಾಲಕರಿಗೆ ಮಾಹಿತಿ ನೀಡಲಾಗಿದೆ ಎಂದು ಸ್ಕೂಲ್ ಆಫ್ ಅರ್ಕಿಟೆಕ್ಚರ್‌ನ ನಿರ್ದೇಶಕ ರಾಮಸ್ವಾಮಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next