Advertisement

Manipal : ಶ್ರೀಕೃಷ್ಣ ಜನ್ಮಾಷ್ಟಮಿ ಸ್ಪರ್ಧೆ; ಉದಯವಾಣಿ ಕಚೇರಿಯಲ್ಲಿ ಪ್ರಶಸ್ತಿ ಪ್ರದಾನ

05:10 PM Sep 02, 2024 | Team Udayavani |

ಮಣಿಪಾಲ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಣಿಪಾಲದ ಉದಯವಾಣಿ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯ ಸಿಬಂದಿಗಳಿಗೆ ಆಯೋಜಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಸೋಮವಾರ ಮಣಿಪಾಲದ ಕೇಂದ್ರ ಕಚೇರಿಯಲ್ಲಿ ನಡೆಯಿತು.

Advertisement

ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ.ನ ಎಂಡಿ ಹಾಗೂ ಸಿಇಓ ವಿನೋದ್ ಕುಮಾರ್ ಮಾತನಾಡಿ, ಸ್ಪರ್ಧೆಯಲ್ಲಿ ಬಹುಮಾನ ಪಡೆಯುವುದಕ್ಕಿಂತಲೂ ಭಾಗವಹಿಸುವಿಕೆ ಅತೀ ಮುಖ್ಯ. ನಿರ್ದಿಷ್ಟ ಗುರಿ, ಛಲ ಇಟ್ಟುಕೊಂಡು ಮುನ್ನಡೆದರೆ ಸಾಧನೆ ಮಾಡಲು ಸಾಧ್ಯವಿದೆ. ಕೆಲವು ವರ್ಷಗಳಿಂದ ಈ ಕಾರ್ಯಕ್ರಮ ಸಂಸ್ಥೆಯಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದ್ದು, ಭಾಗವಹಿಸುವವ ಸಂಖ್ಯೆ ಹಾಗೂ ವಿಜೇತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿರುವುದು ಉತ್ತಮ ಲಕ್ಷಣವಾಗಿದೆ. ಮುಂದಿನ ದಿನಗಳಲ್ಲಿಯೂ ಮತ್ತಷ್ಟು ಮಂದಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಾಗಬೇಕು ಎಂದರು.

ಉದಯವಾಣಿ ಸಂಪಾದಕ ಅರವಿಂದ ನಾವಡ ಉಪಸ್ಥಿತರಿದ್ದರು. ಮಾನವ ಸಂಪನ್ಮೂಲ ವಿಭಾಗದ ಹಿರಿಯ ಮ್ಯಾನೇಜರ್ ಉಷಾರಾಣಿ ಕಾಮತ್ ಸ್ವಾಗತಿಸಿ, ನಿರೂಪಿಸಿದರು.

Advertisement

ವಿಜೇತರ ವಿವರ

ಕೃಷ್ಣ ಕಿರೀಟ ರಚನೆ

ಪ್ರಥಮ: ಸುಮುಖ್ ಶಾನ್‌ಭೋಗ್‌ ಎಸ್, ದ್ವಿತೀಯ:ನಿಖಿತಾ ಮತ್ತು  ವೃಂದಾ‌ ವಿ ನಾಯಕ್.

ಕೃಷ್ಣ ಚಿತ್ರಕ್ಕೆ ಬಣ್ಣ

ಪ್ರಥಮ: ಸುಮುಖ್ ಶಾನ್‌ಭೋಗ್‌ ಎಸ್, ದ್ವಿತೀಯ- ರಾಧಿಕಾ

ಲಡ್ಡು ತಯಾರಿಕೆ

ಪ್ರಥಮ: ವೃಂದಾ ನಾಯಕ್, ಅಶ್ವಿನಿ

ದ್ವಿತೀಯ- ಶ್ರಿದೇವಿ ಎಚ್ ಶೆಟ್ಟಿ, ಪವಿತ್ರಾ

ಮಡಿಕೆ ಒಡೆಯುವ ಸ್ಪರ್ಧೆ

ಪ್ರಥಮ: ಸಿಂಧು‌ ಹೆಗಡೆ, ದ್ವಿತೀಯ – ವಿಜಯ ಶಾನುಭೋಗ್‌, ತೃತೀಯ – ರಜನೀಶ ಬಿ.ಜಿ

ಸಮೂಹ ಗಾಯನ ಸ್ಪರ್ಧೆ

ಪ್ರಥಮ: ರಾಧಿಕಾ, ಅನಿಲ್, ವಿಜಯ್

ದ್ವಿತೀಯ – ಸ್ನೇಹ ಪೈ, ಪವಿತ್ರಾ, ನಿಖಿತಾ‌, ದೀಕ್ಷಿತಾ

ಸಂಸ್ಥೆ ಉದ್ಯೋಗಿಗಳ ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆ -( 1-3 Years)

ಪ್ರಥಮ: ಇಶಾನ್ವಿ (ಸುರೇಶ್‌ ಪ್ರಭು ಬಿ)

ದ್ವಿತೀಯ: ರಿತಾನ್ಶಿ(ಅನುಪಮ)

3-6 ವರ್ಷ

ಪ್ರಥಮ: ರಿಯಾನ್ಶ್‌ ಶೆಟ್ಟಿ (ರವಿಚಂದ್ರ)

ದ್ವಿತೀಯ: ಕೌಸ್ತುಭ (ಸುದರ್ಶನ್‌ ಜಿ)

Advertisement

Udayavani is now on Telegram. Click here to join our channel and stay updated with the latest news.

Next