Advertisement

ಜನವರಿ ಅಂತ್ಯಕ್ಕೆ ಪ್ರಣಾಳಿಕೆ ವರದಿ ಸಿದ್ಧ

06:35 AM Nov 11, 2018 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಗೆ ಸಮಾಜದ ವಿವಿಧ ವರ್ಗದವರಿಂದ ಪ್ರಣಾಳಿಕೆಗೆ ಅಭಿಪ್ರಾಯ ಸಂಗ್ರಹಿಸಿ ಜನವರಿ ಅಂತ್ಯಕ್ಕೆ ಜನರ ಅಭಿಪ್ರಾಯಗಳ ವರದಿ ಸಿದಟಛಿಪಡಿಸಲಾಗುವುದು ಎಂದು ಎಐಸಿಸಿ ಪ್ರಣಾಳಿಕೆ ಸಮಿತಿ ಸಂಚಾಲಕ ಪ್ರೊ. ರಾಜೀವ್‌ ಗೌಡ ಹೇಳಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಪ್ರಣಾಳಿಕೆ ರಚಿಸಲು ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, 20 ಪ್ರಮುಖ ವಿಷಯಗಳ ಮೇಲೆ ಜನಧ್ವನಿ ಹೆಸರಿನಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರೂ ನೇರವಾಗಿ ತಮ್ಮ ಅಭಿಪ್ರಾಯ ಸಲ್ಲಿಸಲು manifesto.inc.in ಗೆ ವೆಬ್‌
ಸೈಟ್‌ ತಮ್ಮ ಅಭಿಪ್ರಾಯ ಸಲ್ಲಿಸಬಹುದು. ಅಥವಾ ವಾಟ್ಸ್‌ಆ್ಯಪ್‌ ನಂಬರ್‌ 7292088245 ಗೆ ತಮ್ಮ ಅಭಿಪ್ರಾಯ ಕಳುಹಿಸಿ ಕೊಡಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next