Advertisement

New Controversy; ಪಾಕಿಸ್ತಾನಿಗಳು ಭಾರತದ ಆಸ್ತಿ ಎಂದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್

05:06 PM Feb 12, 2024 | Team Udayavani |

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು ಪಾಕಿಸ್ತಾನಿಗಳನ್ನು “ಭಾರತದ ದೊಡ್ಡ ಆಸ್ತಿ” ಎಂದು ಕರೆಯುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಉಭಯ ರಾಷ್ಟ್ರಗಳ ನಡುವೆ ಸಂವಹನ ಮಾರ್ಗಗಳನ್ನು ತೆರೆಯುವ ಕರೆಯನ್ನೂ ಅವರು ಪುನರುಚ್ಚರಿಸಿದರು.

Advertisement

ರವಿವಾರ ಲಾಹೋರ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಣಿಶಂಕರ್ ಅಯ್ಯರ್ ಅವರು ಈ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನಿ ಪತ್ರಿಕೆ ದಿ ಡಾನ್ ಉಲ್ಲೇಖಿಸಿ ಎಎನ್ ಐ ವರದಿ ಮಾಡಿದ್ದು, “ನನ್ನ ಅನುಭವದಲ್ಲಿ ಪಾಕಿಸ್ತಾನಿಗಳು ಬಹುಶಃ ಇನ್ನೊಂದು ಕಡೆಗೆ ಅತಿಯಾಗಿ ಪ್ರತಿಕ್ರಿಯಿಸುವ ಜನರು” ಎಂದಿದ್ದಾರೆ.

ನಾವು ಸೌಹಾರ್ದದಿಂದ ವರ್ತಿಸಿದರೆ ಅವರು ಅತಿಯಾದ ಸ್ನೇಹಪರರು ಮತ್ತು ನಾವು ದ್ವೇಷಿಸಿದರೆ ಅವರು ದ್ವೇಷ ಸಾಧಿಸುತ್ತಾರೆ ಎಂದು ಅಯ್ಯರ್ ಹೇಳಿದರು.

ಪಾಕಿಸ್ತಾನದಷ್ಟು ಪ್ರೀತಿಯ ತೋಳುಗಳಿಂದ ಅವರನ್ನು ಯಾವುದೇ ದೇಶವು ಎಂದಿಗೂ ಸ್ವಾಗತಿಸಿಲ್ಲ ಎಂದು ಅಯ್ಯರ್ ಹೇಳಿದರು.

Advertisement

ಪಾಕಿಸ್ತಾನಿ ಪತ್ರಿಕೆಯ ಪ್ರಕಾರ, ಕಾಂಗ್ರೆಸ್ ನಾಯಕ ಅವರು ಲಾಹೋರ್‌ ನಲ್ಲಿ ಕಾನ್ಸುಲ್ ಜನರಲ್ ಆಗಿ ನೇಮಕಗೊಂಡ ಸಮಯವನ್ನು ನೆನಪಿಸಿಕೊಂಡರು.

ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22 ರಂದು ನಡೆದ ‘ಪ್ರಾಣ ಪ್ರತಿಷ್ಠಾ’ ಸಮಾರಂಭವನ್ನು ಖಂಡಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್‌ ಗಾಗಿ ಮಣಿಶಂಕರ್ ಅಯ್ಯರ್ ಅವರ ಪುತ್ರಿ ಸೂರ್ಯ್ಯಾ ಅಯ್ಯರ್ ವಿರುದ್ಧ ದೂರು ದಾಖಲಿಸಿದ ಎರಡು ವಾರಗಳ ನಂತರ ಹೊಸ ವಿವಾದವು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next