Advertisement

Mani-Mysore Highway: ಸರಕಾರಿ ಬಸ್‌ ಢಿಕ್ಕಿ: ಸವಾರ ಸಾವು

11:54 PM Dec 16, 2023 | Team Udayavani |

ಪುತ್ತೂರು/ವಿಟ್ಲ: ಮಾಣಿ ಮೈಸೂರು ಹೆದ್ದಾರಿಯ ಕಬಕ ಸಮೀಪದ ಕೂವೆತ್ತಿಲದಲ್ಲಿ ಶನಿವಾರ ರಾತ್ರಿ ಸರಕಾರಿ ಬಸ್‌ಗೆ ದ್ವಿಚಕ್ರ ವಾಹನವೊಂದು ಢಿಕ್ಕಿಯಾಗಿದ್ದು ಸವಾರ ಮೃತಪಟ್ಟಿದ್ದಾರೆ.

Advertisement

ಬಂಟ್ವಾಳ ಮೂಲದ ಅಹಮ್ಮದ್‌ ಆಶಿಕ್‌ ಅಕ್ಮಲ್‌ (18) ಮೃತಪಟ್ಟಿರುವ ಯುವಕ.

ಮಂಗಳೂರಿನಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಸರಕಾರಿ ಬಸ್‌ ಸಾಧ್ಯವಾದಷ್ಟು ಎಡಬದಿಗೆ ಹೋದರೂ, ಕಬಕ ಕಡೆಯಿಂದ ಆಗಮಿಸಿದ ದ್ವಿಚಕ್ರ ವಾಹನ ಬಸ್‌ಗೆ ಬಂದು ಢಿಕ್ಕಿ ಹೊಡೆದು, ಬಸ್‌ ಚಕ್ರದಡಿಗೆ ಸಿಲುಕಿದ್ದಾರೆ.
ಬಸ್‌ನಲ್ಲಿ ಹೆಚ್ಚಿನ ಜನ ಇದ್ದ ಕಾರಣ ಮತ್ತಷ್ಟು ಬದಿಗೆ ಹೋಗುವ ಸಾಹಸ ಮಾಡಿಲ್ಲ ಎಂಬುದನ್ನು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅತಿಯಾದ ವೇಗ ಹಾಗೂ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಲಾಯಿಸಿದ್ದು, ಅಪಘಾತಕ್ಕೆ ಕಾರಣವೆನ್ನಲಾಗಿದೆ. ಬಸ್‌ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಹೆದ್ದಾರಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದ್ದು, ವಾಹನದಡಿ ಸಿಲುಕಿದ ಸವಾರನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಮೃತಪಟ್ಟಿರುವ ಖಚಿತವಾದ ಹಿನ್ನಲೆ ಸರಕಾರಿ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next