Advertisement

ಕದ್ರಿ ಪಾರ್ಕ್‌: ಮಾವಿನ ಮೇಳಕ್ಕೆ ಸಂಭ್ರಮದ ತೆರೆ

11:19 AM May 27, 2019 | keerthan |

ಮಹಾನಗರ: ತೋಟಗಾರಿಕೆ ಇಲಾಖೆ ದ.ಕ., ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಮಂಡಳಿ ಸಹಯೋಗದಲ್ಲಿ ಕದ್ರಿ ಉದ್ಯಾನವನದಲ್ಲಿ ಶುಕ್ರವಾರದಿಂದ ಆರಂಭವಾದ ಬೆಳೆಗಾರಿಂದ ಬಳಕೆದಾರರಿಗೆ ನೇರ ಮಾವು ಮಾರಾಟ ಮೇಳಕ್ಕೆ ರವಿವಾರ ಸಂಭ್ರಮದ ತೆರೆ ಬಿದ್ದಿದೆ.

Advertisement

ಮೇಳದಲ್ಲಿ ಮಲ್ಗೊವಾ, ದಶಹರಿ, ಸಕ್ಕರೆಗುತ್ತಿ, ಪೈರಿ, ಮುಂಡಾ, ಬೇಗನ್‌ಪಲ್ಲಿ, ಸಿಂಧೂರ, ಶುಗರ್‌ ಬೇಬಿ, ಕೇಸರ್‌, ಆಪೂಸ್‌, ಹಿಮಾಯತ್‌, ಮಲ್ಲಿಕಾ, ರಸಪೂರಿ, ಬಾದಾಮಿ, ಸೇಂದೂರು, ಸೋತಾಪುರಿ, ಸುವರ್ಣರೇಖ ಸೇರಿದಂತೆ 10ರಿಂದ 15ಕ್ಕೂ ಅಧಿಕ ವೈವಿಧ್ಯಮಯ ತಳಿಯ ಮಾವುಗಳನ್ನು ಗ್ರಾಹಕರು ಖರೀದಿಸಿ ಮಾವಿನ ರುಚಿ ಸವಿದರು. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಮಾವು ಬೆಳೆಗಾರರಿಗೆ ಉತ್ತಮ ಬೆಲೆ ನೀಡುವ ಉದ್ದೇಶದಿಂದ, ಮಾವು ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಕಾರಣದಿಂದ ಹಾಗೂ ನೈಸರ್ಗಿಕವಾಗಿ ಮಾಗಿಸಿದ ಮಾವುಗಳನ್ನು ಗ್ರಾಹಕರಿಗೆ ನೀಡುವ ಉದ್ದೇಶದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಾವು ಮೇಳಗಳನ್ನು ಆಯೋಜಿಸಲಾಗುತ್ತಿದೆ.

ರಜಾದಿನ ಮೇಳಕ್ಕೆ ಉತ್ತಮ ಸ್ಪಂದನೆ
ರವಿವಾರ ರಜಾದಿನವಾದ್ದರಿಂದ ಮಾವು ಮೇಳಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಮುಂಜಾನೆಯಿಂದಲೇ ಮಾವು ಮೇಳದತ್ತ ಆಗಮಿಸಿದ ಜನರು ತಮಗೆ ಇಷ್ಟವಾದ ತಳಿಯ ಮಾವುಗಳನ್ನು ಖರೀದಿಸಿದರು. ಕಳೆದ ಎರಡು ದಿನಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಮೇಳಕ್ಕೆ ರವಿವಾರ ಉತ್ತಮ ಸ್ಪಂದನೆ ವ್ಯಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next