Advertisement

ಕಿನ್ನಿಗೋಳಿ: ದುಷ್ಕರ್ಮಿಗಳಿಂದ ನಾಗಬನ ಧ್ವಂಸ

03:22 PM May 02, 2022 | Team Udayavani |

ಕಿನ್ನಿಗೋಳಿ: ಕಟೀಲು ಮಲ್ಲಿಗೆಯಂಗಡಿಯ ಪಡುಸಾಂತ್ಯ ಭಂಡಾರಿ ಮನೆತನದ ನಾಗಬನದಲ್ಲಿದ್ದ 6 ನಾಗನ ಕಲ್ಲುಗಳನ್ನು ಬೇರೆ ಬೇರೆ ಜಾಗದಲ್ಲಿ ಎಸೆದು ವಿಕೃತಿ ಮೆರೆದ ಘಟನೆ ರವಿವಾರ ನಡೆದಿದೆ.

Advertisement

ರವಿವಾರ ಬೆಳಗ್ಗೆ ಭಂಡಾರಿ ಮನೆತನದ ವ್ಯಕ್ತಿಯಾಬ್ಬರು ನಾಗನ ಕಲ್ಲು ಆವರಣದಿಂದ ಹೊರಗೆ ಬಿದ್ದದ್ದನ್ನು ಗಮನಿಸಿ ಪರಿಶೀಲನೆ ನಡೆಸಿದಾಗ ನಾಗಬನದಲ್ಲಿ ಪ್ರತಿಷ್ಠೆ ಮಾಡಿದ ಜಾಗದಿಂದ 6 ನಾಗನ ಕಲ್ಲುಗಳನ್ನು ಎಸೆದು ಬೇರೆ ಬೇರೆ ಜಾಗದಲ್ಲಿ ಹಾಕಲಾಗಿದೆ. ಬಿಜೆಪಿ ನಾಯಕ ಈಶ್ವರ್‌ ಕಟೀಲು ತಪ್ಪಿತಸ್ಥರನ್ನು ಬಂಧಿಸಿ ಕ್ರಮ ಜರಗಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ:  ಕುಮ್ಮಟದುರ್ಗದಲ್ಲಿ ಇತಿಹಾಸ ಸಾರುವ ಸ್ಮಾರಕ, ವೀರಗಲ್ಲು ಶಿಲಾಶಾಸನಗಳು ನಾಪತ್ತೆ

ಸ್ಥಳಕ್ಕೆ ಎಸಿಪಿ ಮಹೇಶ್‌ ಕುಮಾರ್‌ ಹಾಗೂ ಪೊಲೀಸರ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next