Advertisement

Mangaluru: ಮನೆ ಕಳ್ಳತನ ಪ್ರಕರಣ… ಸೊತ್ತುಗಳ ಸಮೇತ ಮೂವರು ಆರೋಪಿಗಳ ಬಂಧನ

12:54 PM Jul 19, 2024 | Team Udayavani |

ಮಂಗಳೂರು: ನಗರದ ಕೋಡಿಕ್ಕಲ್ ವಿವೇಕಾನಂದ ನಗರದಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಉರ್ವಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ವೆಂಕಟೇಶ್ (21), ಸಾಗರ್ (21) ಮತ್ತು ರಂಜಿತ್ (20) ಬಂಧಿತ ಆರೋಪಿಗಳು.

ಜುಲೈ 6 ರಂದು ಮೂವರು ಆರೋಪಿಗಳು ಕೋಡಿಕ್ಕಲ್ ವಿವೇಕಾನಂದ ನಗರದಲ್ಲಿರುವ ಮನೆಯೊಂದಕ್ಕೆ ಕನ್ನ ಹಾಕಿ ಸುಮಾರು 80 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು, ಈ ಕುರಿತು ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ಕಳ್ಳರ ಪತ್ತೆಗೆ ಬಲೇ ಬೀಸಿದ್ದಾರೆ ಅದರಂತೆ ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗಂಗೌಡನಹಳ್ಳಿ ಬಳಿ ಬಂಧಿಸಲಾಗಿದೆ, ಅಲ್ಲದೆ ಬಂಧಿತರಿಂದ 4,64,750/- ರೂ ಮೌಲ್ಯದ ಚಿನ್ನಾಭರಣ ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಸ್ಕೂಟಿಯನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ: Bantwala: ನದಿಯಲ್ಲಿ ನೀರಿನ ಮಟ್ಟ ಏರಿಕೆ… ರಸ್ತೆಗಳು ಜಲಾವೃತ, ಸಂಚಾರ ಕಡಿತಗೊಳ್ಳುವ ಭೀತಿ

Advertisement

Udayavani is now on Telegram. Click here to join our channel and stay updated with the latest news.

Next