Advertisement

Mangaluru ಚೂರಿ ಬೀಸಿ ವ್ಯಾಪಾರಿಗೆ ಕೊಲೆ ಬೆದರಿಕೆ

09:57 PM Sep 15, 2023 | Team Udayavani |

ಮಂಗಳೂರು: ಅಂಗಡಿ ವ್ಯಾಪಾರಿಯೋರ್ವರಿಗೆ ಚೂರಿ ಬೀಸಿ ಕೊಲೆ ಬೆದರಿಕೆ ಹಾಕಿದ ಘಟನೆ ನಗರದ ಎಕ್ಕೂರು ಮೇಗಿನ ಮನೆ ಎನ್ನುವಲ್ಲಿ ಸಂಭವಿಸಿದೆ.

Advertisement

ಪ್ರಜ್ವಲ್‌ ಅವರು ತನ್ನ ದೊಡ್ಡಪ್ಪನ ದಿನಸಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದು, ಸೆ. 13ರಂದು ರಾತ್ರಿ 10 ಗಂಟೆಗೆ ಧನುಷ್‌ ಭಂಡಾರಿ ಅಂಗಡಿಗೆ ಬಂದು ಜ್ಯೂಸ್‌ ಹಾಗೂ ತಿಂಡಿ ತಿನಸು ತಿಂದು ಹಣ ಕೊಡದೆ ಹೋಗಿದ್ದ. ಸೆ. 14ರದು ರಾತ್ರಿ 9 ಗಂಟೆಗೆ ಬಂದು ಸಿಗರೇಟ್‌ ಕೇಳಿದ. ಆಗ ಪ್ರಜ್ವಲ್‌, ಬಾಕಿ ಹಣ ಕೊಟ್ಟರೆ ಸಿಗರೇಟ್‌ ಕೊಡುವುದಾಗಿ ಹೇಳಿದ್ದರು. ಅದಕ್ಕೆ ಆರೋಪಿ ಧನುಷ್‌ ಅವಾಚ್ಯವಾಗಿ ಬೈದು ಕಿಸೆಯಿಂದ ಚೂರಿ ತೆಗೆದು ಬೀಸಿದ. ಪ್ರಜ್ವಲ್‌ ಹಿಂದಕ್ಕೆ ಹಾರಿ ತಪ್ಪಿಸಿಕೊಂಡರು.

ಆರೋಪಿ ಅಂಗಡಿಯ ಒಳಗೆ ನುಗ್ಗಲು ಪ್ರಯತ್ನಿಸಿದಾಗ ಪ್ರಜ್ವಲ್‌ನ ದೊಡ್ಡಮ್ಮ, ನೆರೆಕರೆಯವರು ಅಡ್ಡನಿಂತು ತಡೆದರು. ಈ ವೇಳೆ ಆರೋಪಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಕಂಕನಾಡಿ ನಗರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next