Advertisement

ಮಂಗಳೂರು: ರಸ್ತೆ ದುರಸ್ತಿಗೆ ಆಗ್ರಹಿಸಿ ಮೌನ ಪ್ರತಿಭಟನೆ

01:56 PM Oct 12, 2019 | Team Udayavani |

ಮಂಗಳೂರು: ನಂತೂರು ರಸ್ತೆ ದುರಸ್ತಿಗೆ ಆಗ್ರಹಿಸಿ ರೂಪನ್ ಫೆರ್ನಾಂಡೀಸ್ ಮತ್ತು ಅರ್ಜುನ್ ಮಸ್ಕರೇನಸ್ ಎಂಬುವರು ಶನಿವಾರದಂದು ನಂತೂರು ಸರ್ಕಲ್ ವೃತ್ತದಲ್ಲಿ ನಾಗರಿಕರ ಪರವಾಗಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ.

Advertisement

ನಂತೂರು ವೃತ್ತದಲ್ಲಿ ಬಹಳಷ್ಟು ಅಪಘಾತಗಳು ಸಂಭವಿಸಿ, ಸಾಕಷ್ಟು ಸಾವು- ನೋವು ಸಂಭವಿಸಿದರೂ ಇನ್ನು ಈ ಕುರಿತಾಗಿ ಸರಕಾರ ಸೂಕ್ತವಾದ ಕ್ರಮ ಕೈಗೊಂಡಿಲ್ಲ ಹಾಗೂ ಸರಿಯಾಗಿ ರಸ್ತೆ ದುರಸ್ತಿಯ ಕಾರ್ಯವೂ ನಡೆಸಿಲ್ಲ.

ಈ ಬಗ್ಗೆ ಪ್ರತಿಭಟನೆಕಾರರು ರಸ್ತೆಗಳು ಗುಂಡಿ ಮುಕ್ತವಾಗಿರಲಿ ಎಂಬ ಫಲಕಗಳನ್ನು ಪ್ರತಿಭಟನಾ ಸ್ಥಳದ ಸುತ್ತಲೂ ಹಾಕಿ ಮೌನವಾಗಿ ಪ್ರತಿಭಟಿಸುತ್ತಿದ್ದಾರೆ. ಬೆಳಗ್ಗೆ ಆರಂಭವಾದ ಮೌನ ಪ್ರತಿಭಟನೆಯೂ ಸಂಜೆಯವರೆಗೆ ಮುಂದುವರಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next