Advertisement

Mangaluru ದರೋಡೆ ಪ್ರಕರಣ: 6 ಆರೋಪಿಗಳು ಪೊಲೀಸ್‌ ಕಸ್ಟಡಿಗೆ

10:10 PM Jul 05, 2024 | Team Udayavani |

ಮಂಗಳೂರು: ಉಳಾಯಿಬೆಟ್ಟು ಪೆರ್ಮಂಕಿಯ ಪಿಡಬ್ಲ್ಯೂ ಡಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್‌ ಅವರ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 6ಮಂದಿ ಆರೋಪಿಗಳಿಗೆ ನ್ಯಾಯಾಲಯ ಪೊಲೀಸ್‌ ಕಸ್ಟಡಿ ನೀಡಿದೆ.

Advertisement

ಪ್ರಕರಣದಲ್ಲಿ ಒಟ್ಟು 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಇವರಲ್ಲಿ ತ್ರಿಶೂರಿನ ನಿವಾಸಿಗಳಾದ ಶಿಜೋ ದೇವಸಿ, ಸತೀಶ್‌ ಬಾಬು, ಶಾಕೀರ್‌ ಹುಸೇನ್‌, ಸಜೀಶ್‌ ಎಂ., ವಿನೋಜ್‌ ಪಿ.ಕೆ., ತಿರುವನಂತಪುರ ಅಯಿನಮೋಡು ನಿವಾಸಿ ಜಾನ್‌ ಬಾಸ್ಕೋಗೆ ಹೆಚ್ಚಿನ ವಿಚಾರಣೆಗೆ 7 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

ಉಪ್ಪಳ ನಿವಾಸಿ ಬಾಲಕೃಷ್ಣ ಶೆಟ್ಟಿ, ಬಂಟ್ವಾಳ ಪರುವಾಯಿಯ ರೇಮಂಡ್‌ ಡಿ’ಸೋಜಾ, ನೀರುಮಾರ್ಗ ಬಳಿಯ ರಮೇಶ್‌, ವಸಂತ್‌ ಕುಮಾರ್‌ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next