Advertisement

Mangaluru: ನ.10ರಂದು ಸಾಧಕರಿಗೆ ಗೌರವ ಪ್ರಶಸ್ತಿ, ಪುಸ್ತಕ ಪುರಸ್ಕಾರ ಪ್ರದಾನ

01:28 AM Oct 16, 2024 | Team Udayavani |

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಸಾಹಿತ್ಯ, ಕಲೆ, ಜಾನಪದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ, ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರ ನೀಡುತ್ತಿದ್ದು, ಈ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ನ. 10ರಂದು ಹೊನ್ನಾವರದ ಕಾಸರಕೋಡಿನಲ್ಲಿ ನಡೆಯಲಿದೆ.

Advertisement

ಮೀನುಗಾರಿಕೆ ಸಚಿವ ಮಂಕಾಳ ಎಸ್‌. ವೈದ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕರಾದ ಸತೀಶ್‌ ಸೈಲ್‌, ದಿನಕರ ಶೆಟ್ಟಿ, ಕಾಸರಕೋಡು ಪಂಚಾಯತ್‌ ಅಧ್ಯಕ್ಷರಾದ ಮಂಕಾಳಿ ಪ್ರಕಾಶ್‌ ಹರಿಜನ್‌ ಭಾಗವಹಿಸಲಿದ್ದಾರೆ.

ಪ್ರಶಸ್ತಿ ಪುರಸ್ಕೃತರು
ಕೊಂಕಣಿ ಸಾಹಿತ್ಯ ವಿಭಾಗ-ಮಾರ್ಸೆಲ್‌ ಎಂ. ಡಿ’ಸೋಜಾ ಮಂಗಳೂರು, ಕಲಾ ವಿಭಾಗ-ಹ್ಯಾರಿ ಫೆರ್ನಾಂಡಿಸ್‌ ಮುಂಬಯಿ, ಜಾನಪದ-ಅಶೋಕ್‌ ದಾಮು ಕಾಸರಕೋಡ ಆಯ್ಕೆಯಾಗಿದ್ದಾರೆ. ಪುಸ್ತಕ ಪುರಸ್ಕಾರಕ್ಕಾಗಿ ಕವನ ವಿಭಾಗ-ಬಂಟ್ವಾಳದ ಮೇರಿ ಸಲೋಮಿ ಡಿ’ಸೋಜಾ ಅವರ “ಅಟ್ವೋ ಸುರ್‌’, ಸಣ್ಣಕತೆ ವಿಭಾಗ-ಫಾ| ರೊಯ್ಸನ್‌ ಫೆರ್ನಾಂಡಿಸ್‌ ಹಿರ್ಗಾನ್‌ ಅವರ “ಪಯ್ಲಿ ಭೆಟ್‌’ ಹಾಗೂ ಭಾಷಾಂತರ ವಿಭಾಗ-ಸ್ಟೀಫನ್‌ ಮಸ್ಕರೇನ್ಹಸ್‌(ಹೇಮಾಚಾರ್ಯ) ಅವರ “ಎಕ್ಲೊ ಎಕ್ಸುರೊ’ ಕೃತಿಗಳು ಆಯ್ಕೆಯಾಗಿವೆ. ಗೌರವ ಪ್ರಶಸ್ತಿ 50,000 ರೂ. ಹಾಗೂ ಪುಸ್ತಕ ಪುರಸ್ಕಾರ 25,000 ರೂ. ನಗದು ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next