Advertisement

Mangaluru;ಜವಳಿ ಮಳಿಗೆಯಿಂದ ಹಣ ಕಳವು

10:08 PM Jul 21, 2023 | Team Udayavani |

ಮಂಗಳೂರು: ನಗರದ ಖ್ಯಾತ ಜವಳಿ ಅಂಗಡಿಯ ಬೀಗ ಒಡೆದು ಯಾರೋ ಕಳ್ಳರು ಹಣ ಕಳವು ಮಾಡಿದ್ದಾರೆ. ಭವಂತಿ ರಸ್ತೆಯ ದೂಜ ಪೂಜಾರಿ ಕೋ ಮಳಿಗೆಯಿಂದ 20 ಸಾವಿರ ರೂ. ಕಳವಾಗಿರುವುದು ಶುಕ್ರವಾರ ಬೆಳಗ್ಗೆ ಗೊತ್ತಾಗಿದೆ.

Advertisement

ಮಳಿಗೆ ಮಾಲೀಕ ಅಕ್ಷಯ ಕುಮಾರ್‌ ಪಿ.ಕೆ. ಅವರು ಗುರುವಾರ ರಾತ್ರಿ ವ್ಯಾಪಾರ ಮುಗಿಸಿ ಅಂಗಡಿ ಬಂದ್‌ ಮಾಡಿ ಹೋಗಿದ್ದು, ಶುಕ್ರವಾರ 8 ಗಂಟೆಗೆ ಪರಿಚಯದವರು ಫೋನ್‌ ಮಾಡಿ ಅಂಗಡಿ ಬೀಗ ಒಡೆದಿರುವ ಮಾಹಿತಿ ನೀಡಿದ್ದಾರೆ.

ಕೂಡಲೇ ಅಂಗಡಿಗೆ ಬಂದಾಗ ಶಟರ್‌ ಬಾಗಿಲಿನ ಬೀಗ ಒಡೆದು ಎದುರಿನ ಗ್ಲಾಸ್‌ ತುಂಡರಿಸಿ ಒಳ ಪ್ರವೇಶಿಸಿ ಡ್ರಾವರ್‌ನಲ್ಲಿದ್ದ ಸುಮಾರು 20 ಸಾವಿರ ರೂ. ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಬಂದರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next