Advertisement

ಮಂಗಳೂರು: ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯ ಸರ್ಕಾರ ನಡೆದುಕೊಳ್ಳಬೇಕು: ಸಿ.ಟಿ ರವಿ

11:49 AM Dec 26, 2019 | Naveen |

ಮಂಗಳೂರು: ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯ ಸರ್ಕಾರ ನಡೆದುಕೊಳ್ಳಬೇಕು. ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡಿದವರ ಆಸ್ತಿಯನ್ನು ಜಪ್ತಿ ಮಾಡಬೇಕು ಎಂದು ಸಚಿವ ಸಿ.ಟಿ ರವಿ ಹೇಳಿದರು.

Advertisement

ಮಂಗಳೂರು ಗಲಭೆಯಲ್ಲಿ ಆಸ್ತಿಪಾಸ್ತಿ ನಷ್ಟ ಹಿನ್ನಲೆಯ ವಿಚಾರವಾಗಿ ಅವರು ಗುರುವಾರದಂದು ಮಂಗಳೂರಿನಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಕಿಡಿಗೇಡಿಗಳ ಮೇಲೆ  ಕಂದಾಯ ಹೇರಬೇಕು. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಗಲಭೆಯಲ್ಲಿ ಅಮಾಯಕರು ಸತ್ತರೆ ಪರಿಹಾರ ನೀಡುತ್ತೇವೆ. ಅಮಾಯಕರು ಆಗದಿದ್ದರೆ ಕ್ರಿಮಿನಲ್ ಚಟುವಟಿಕೆ ಭಾಗವಹಿಸಿದ್ದವರಿಗೆ ಪರಿಹಾರ ಕೊಡಬೇಕಾ? ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟಪಡಿಸಬೇಕು. ಸರಕಾರವನ್ನು ಅಸ್ತಿರತೆಗೆ ತರಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಗೆ ಚುನಾವಣೆ ಸೋತಾಗ ಇವಿಎಂ ಮೇಲೆ ಅನುಮಾನ; ಈಗ ಪೊಲೀಸರ ಮೇಲೆ ಅನುಮಾನ; ಕಾಂಗ್ರೆಸ್ ಗೆ ಅನುಮಾನ ಪಡೋದು ಕೆಟ್ಟ ಚಾಳಿ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next