Advertisement

Mangaluru ಗಾಂಜಾ ಸೇವನೆ ಆರೋಪ: ಮೂವರ ಬಂಧನ

12:33 AM Dec 06, 2023 | Team Udayavani |

ಮಂಗಳೂರು: ನಿಷೇಧಿತ ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಿದ ಆರೋಪದಲ್ಲಿ ಮಂಗಳೂರು ಪೊಲೀಸರು ರವಿ ವಾರ ನಗರದ ದಂಬೆಲ್‌ ಮತ್ತು ಉತ್ತರ ದಕ್ಕೆಯಲ್ಲಿ ಮೂವರನ್ನು ಬಂಧಿಸಿದ್ದಾರೆ.

Advertisement

ಅಶೋಕನಗರ ಕೋಡಿಕಲ್‌ಕಟ್ಟೆಯ ಜಾನ್‌ಸನ್‌ (30), ವಿಲ್ಸನ್‌ (28) ಮತ್ತು ತಮಿಳುನಾಡಿನ ಕಾರ್ತಿಕ (33) ಬಂಧಿತರು. ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು ಎನ್‌ಡಿಪಿಎಸ್‌ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next