Advertisement

ಮಂಗಳೂರು: ಹೂಡಿಕೆದಾರರಿಗೆ 1 ಕೋಟಿ ರೂ. ವಂಚಿಸಿದ ವ್ಯಕ್ತಿಯ ಬಂಧನ

08:38 PM Mar 20, 2023 | Team Udayavani |

ಮಂಗಳೂರು: ಹೆಚ್ಚಿನ ಲಾಭಕ್ಕಾಗಿ ಷೇರುಪೇಟೆಯಲ್ಲಿ ಹಣ ಹೂಡುವುದಾಗಿ ಭರವಸೆ ನೀಡಿ ಮಂಗಳೂರಿನಲ್ಲಿ ಹೂಡಿಕೆದಾರರಿಗೆ 1 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಮಂಗಳೂರು CEN ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

Advertisement

ಆರೋಪಿಯನ್ನು ಕೇರಳದ ಕ್ಯಾಲಿಕಟ್ ನಿವಾಸಿ ಜಿಜೋ ಜಾನ್ ಪಿ ಕೆ (29) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಜಿಜೋ ಮಂಗಳೂರಿನ ಶಕ್ತಿನಗರದ ಹೂಡಿಕೆದಾರರಿಂದ  ಹೆಚ್ಚಿನ ಆದಾಯವನ್ನು ತಂದುಕೊಡುವ ಭರವಸೆ ನೀಡಿದ್ದ.

ತನ್ನ ಸ್ಟಾಕ್ ಮಾರುಕಟ್ಟೆ ಹೂಡಿಕೆಯಿಂದ 15% ನಷ್ಟು ಹೆಚ್ಚಿನ ಆದಾಯವನ್ನು ನೀಡುವುದಾಗಿ ಜಿಜೋ ಭರವಸೆ ನೀಡಿದ್ದ. ಇದು ಸುಳ್ಳು ಭರವಸೆ ಎಂದು ತಿಳಿದುಬಂದಿದ್ದು, ಹಣವನ್ನು ಹಿಂದಿರುಗಿಸಲು ವಿಫಲವಾಗಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next