Advertisement

ಎರಡನೇ ದಿನಕ್ಕೆ ಕಾಲಿಟ್ಟ ಮೀನುಗಾರರ ಧರಣಿ

05:01 AM Feb 02, 2019 | Team Udayavani |

ಮಹಾನಗರ: ಬೆಳಕು ಮೀನುಗಾರಿಕೆಯನ್ನು ಸಂಪೂರ್ಣ ನಿಷೇಧಿಸುವಂತೆ ಆಗ್ರಹಿಸಿ ಮಂಗಳೂರಿನ ಬಂದರಿನ ದಕ್ಕೆಯಲ್ಲಿರುವ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರ ಕಚೇರಿಯ ಮುಂದೆ ಟ್ರಾಲ್‌ಬೋಟ್ ಮೀನುಗಾರರ ಧರಣಿ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

Advertisement

ಶನಿವಾರವೂ ಪ್ರತಿಭಟನೆ ಮುಂದುವರಿಸಲಿದ್ದಾರೆ ಎಂದು ಮೀನುಗಾರಿಕಾ ಮುಖಂಡ ನಿತಿನ್‌ ಕುಮಾರ್‌ ತಿಳಿಸಿದ್ದಾರೆ. ಸಂದರ್ಭ ಟ್ರಾಲ್‌ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ನಿತಿನ್‌ ಕುಮಾರ್‌, ಉಪಾಧ್ಯಕ್ಷ ಯು.ಕೆ. ಅಬ್ಟಾಸ್‌, ಪ್ರಧಾನ ಕಾರ್ಯದರ್ಶಿ ರಾಜೇಶ್‌ ಪುತ್ರನ್‌ ಉಳ್ಳಾಲ, ಜತೆ ಕಾರ್ಯದರ್ಶಿ ಸಂದೀಪ್‌ ಪುತ್ರನ್‌, ಗಿಲ್‌ನೆಟ್ ಮೀನುಗಾರ ಸಂಘದ ಕಾರ್ಯದರ್ಶಿ ಹೈದರ್‌ ಮೂಲ ಮೀನುಗಾರರ ಸಂಘದ ಅಧ್ಯಕ್ಷ ಅಶ್ವತ್ಥ್ ಕಾಂಚನ್‌, ಉಪಾಧ್ಯಕ್ಷ ರಾಘವ ಅಮೀನ್‌, ಕಾರ್ಯದರ್ಶಿ ಹಸನ್‌, ಕೇಶವ್‌ ಮೆಂಡನ್‌ ಸೇರಿದಂತೆ ಅನೇಕ ಮಂದಿ ಟ್ರಾಲ್‌ಬೋಟ್ ಮೀನುಗಾರರು ಉಪಸ್ಥಿತರಿದ್ದರು.

ವಿಚಾರಣೆ ಫೆ. 6ಕ್ಕೆ ಮುಂದೂಡಿಕೆ
ಬೆಳಕು ಮೀನುಗಾರಿಕೆಗೆ ಸಂಬಂಧಿ ಸಿದ ವಿವಾದ ಹೈಕೋರ್ಟ್‌ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಶುಕ್ರವಾರ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಫೆ. 6ಕ್ಕೆ ಮುಂದೂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next