Advertisement

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

08:53 PM May 08, 2024 | Team Udayavani |

ಭಟ್ಕಳ: ಅಳ್ವೆಕೋಡಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟವೊಂದರ ಮೀನುಗಾರನೊರ್ವ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದಿರುವ ಘಟನೆ ಬುಧವಾರ ಸಂಜೆ ನಡೆದಿದೆ.

Advertisement

ಮೀನುಗಾರನನ್ನು ಶಿರಾಲಿ ಮಾವಿನಕಟ್ಟೆಯ ಹೆದ್ದಾರಿಮನೆ ನಿವಾಸಿ ಗಿರೀಶ ಪರಮಯ್ಯ ದೇವಾಡಿಗ ಎಂದು ಗುರುತಿಸಲಾಗಿದೆ.

ಬುಧವಾರ ಈತನು ಇತರೇ ಮೀನುಗಾರರೊಂದಿಗೆ ಅಳ್ವೆಕೋಡಿ ಬಂದರಿನಿಂದ ಜಲ ವಿಜಯ ಎಂಬ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ಸಮಯದಲ್ಲಿ ಶಿರಾಲಿ ಕುಂದದ ಸಮೀಪ ಮೀನಿಗಾಗಿ ಬಲೆ ಬೀಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲಿಗೆ ಬಲೆ ಸಿಲುಕಿ ಸಮುದ್ರದಲ್ಲಿ ಬಿದ್ದು ತೀವ್ರ ಅಸ್ವಸ್ಥಗೊಂಡದ್ದು,ತಕ್ಷಣ ಅವರನ್ನು ಬೋಟ್‌ನ ಮಾಲೀಕರು ಹಾಗೂ ಇತರ ಮೀನುಗಾರರು ಸೇರಿ ರಕ್ಷಣೆ ಮಾಡಿ ಅಳ್ವೆಕೊಡಿ ಧಕ್ಕೆಗೆ ತಂದು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next