Advertisement

Mangaluru ಮಾದಕ ವಸ್ತು ಸೇವನೆ: ಯುವಕನ ಸೆರೆ

01:47 AM Jan 17, 2024 | Team Udayavani |

ಮಂಗಳೂರು: ನಿಷೇಧಿತ ಮಾದಕ ವಸ್ತು ಸೇವಿಸಿದ್ದ ಯುವಕನನ್ನು ನಗರದ ಸೈಬರ್‌, ನಾರ್ಕೊಟಿಕ್‌ ಮತ್ತು ಆರ್ಥಿಕ ಅಪರಾಧ (ಸೆನ್‌) ಠಾಣೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

Advertisement

ತಮಿಳುನಾಡಿನ ರಾಕೇಶ (20) ಬಂಧಿತ ಆರೋಪಿ. ಈತ ನಗರದ ನೆಲ್ಲಿಕಾಯಿ ರಸ್ತೆಯ ಬಳಿ ನಶೆಯಲ್ಲಿ ನಡೆದಾಡುತ್ತಿದ್ದ. ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೈಲು ಢಿಕ್ಕಿ : ಸಾವು
ಕಾಸರಗೋಡು: ಉದುಮ ಪಳ್ಳದಲ್ಲಿ ರೈಲು ಢಿಕ್ಕಿ ಹೊಡೆದು ಪಾಲಕುನ್ನು ಆರಾಟ್‌ಕಡವು ಏರೋಲ್‌ ಕುರತ್ತಿಯಮ್ಮ ತರವಾಡಿನ ಸಮೀಪದ ಬೇಲಕ್ಕಾಡ್‌ ಹೌಸ್‌ನ ದಿನೇಶನ್‌(51) ಸಾವಿಗೀಡಾದರು. ಕಾಂಕ್ರೀಟ್‌ ಕಾರ್ಮಿಕರಾದ ದಿನೇಶನ್‌ ರೈಲು ಹಳಿ ದಾಟುತ್ತಿದ್ದಾಗ ರೈಲು ಗಾಡಿ ಢಿಕ್ಕಿ ಹೊಡೆದಿರಬೇಕೆಂದು ಶಂಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next