Advertisement

Mangaluru: ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಶವ ಪತ್ತೆ

07:17 PM Oct 14, 2024 | Team Udayavani |

ಮಂಗಳೂರು: ಪಚ್ಚನಾಡಿ ಸಂತೋಷ್‌ನಗರ ಮೈದಾನದ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಕೊಳೆತ ಶವ ಪತ್ತೆಯಾಗಿದೆ.

Advertisement

ಸ್ಥಳೀಯರಾದ ರಿತೇಶ್‌ ಎನ್ನುವವರು ಈ ಪ್ರದೇಶದಲ್ಲಿ ಸಾಗುತ್ತಿದ್ದ ವೇಳೆ ವಾಸನೆ ಬರುತ್ತಿದ್ದುದನ್ನು ಕಂಡು ಪರಿಶೀಲಿಸಿದಾಗ ಸುಮಾರು 35 – 45 ವರ್ಷದೊಳಗಿನ ಅಪರಿಚಿತ ವ್ಯಕ್ತಿಯೊಬ್ಬರು ಮರದ ಕೊಂಬೆಗೆ ಎರಡು ಬೈರಾಸುಗಳನ್ನು ಜೋಡಿಸಿ ಅದರಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ.

ದೇಹದ ಭಾರದಿಂದ ಶವ ಕುಳಿತ ಸ್ಥಿತಿಯಲ್ಲಿ ಇತ್ತು. ದೇಹವು ಸಂಪೂರ್ಣವಾಗಿ ಕೊಳೆತಿದ್ದು, ಮುಖ ಗುರುತು ಸಿಗದಷ್ಟು ಕೊಳೆತು ಹೋಗಿತ್ತು. ಸುಮಾರು 5.7 ಅಡಿ ಎತ್ತರ, ದೇಹದಲ್ಲಿ ತೋಳಿನ ಮಣಿಗಂಟಿನ ವರೆಗೆ ಮಡಚಿದ ಶರ್ಟ್‌, ಕಡು ನೀಲಿ ಬಣ್ಣದ ಪ್ಯಾಂಟ್‌, ಬಳಿ ಮತ್ತು ಕಂದು ಬಣ್ಣದ ಬಾರ ಇರುವ ಮಾಸಿದ ಚಪ್ಪಲ್‌ ಇತ್ತು. ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಚಹರೆಯ ಮೃತ ವ್ಯಕ್ತಿಯ ಪರಿಚಯ ಇದ್ದಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯನ್ನು ಸಂಪರ್ಕಿಸಬಹುದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next