Advertisement

Mangaluru: ಕೆಮರಾ ಖರೀದಿಸುವುದಾಗಿ ತಿಳಿಸಿ ವಂಚನೆ; ಪ್ರಕರಣ ದಾಖಲು

09:39 PM Oct 03, 2024 | Team Udayavani |

ಮಂಗಳೂರು: ಕೆಮರಾ ಮಾರಾಟ ಮಾಡುವ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಜಾಹೀರಾತು ನೀಡಿದ್ದ ಯುವಕನಿಗೆ ಕೆಮರಾ ಖರೀದಿಸುವುದಾಗಿ ಹೇಳಿ ಮಹಿಳೆ, ಆಕೆಯ ಗಂಡ ಮತ್ತು ಮಗ ಮೋಸ ಮಾಡಿ ಕೆಮರಾ ಸಹಿತ ಪರಾರಿಯಾಗಿದ್ದು, ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪುತ್ತೂರಿನ ಯುವಕನೋರ್ವ ತನ್ನ ಕೆನಾನ್‌ ರೆಬಲ್‌ ಎಸ್‌ಎಲ್‌-2 ಕೆಮರಾವನ್ನು ಮಾರಾಟ ಮಾಡುವ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಜಾಹೀರಾತು ನೀಡಿದ್ದು, ಜಾಹೀರಾತು ನೋಡಿದ ಮಹಿಳೆಯೊಬ್ಬರು ತಾನು ಖರೀದಿಸುವುದಾಗಿ ಕರೆ ಮಾಡಿ ತಿಳಿಸಿದ್ದಾರೆ. ಅದರಂತೆ ಸೆ.28ರಂದು ಮಂಗಳೂರಿನ ಯುನಿಟಿ ಆಸ್ಪತ್ರೆ ಬಳಿಗೆ ಬರುವಂತೆ ಮಹಿಳೆ ಆತನಿಗೆ ತಿಳಿಸಿದ್ದಾರೆ. ಯುವಕ ಮಧ್ಯಾಹ್ನ 2.30ರ ವೇಳೆಗೆ ಆಸ್ಪತ್ರೆ ಬಳಿಗೆ ಬಂದು ಆಕೆಗೆ ಕರೆ ಮಾಡಿದ್ದಾನೆ. ಆಗ ಬೈಕ್‌ನಲ್ಲಿ ಆಕೆಯ ಗಂಡ ಮುನೀರ್‌ ಮತ್ತು ಮಗ ಬಂದಿದ್ದು, ಯುವಕನನ್ನು ಮಹಿಳೆ ಇದ್ದಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ಆಕೆಗೆ ಕೆಮರಾ ತೋರಿಸಿದಾಗ ತನಗೆ ಇಷ್ಟವಾಗಿದೆ ಎಂದು ತಿಳಿಸಿ ಕೆಮರಾ ಪಡೆದುಕೊಂಡು, ಎಟಿಎಂನಿಂದ ಹಣ ಡ್ರಾ ಮಾಡಿ ಕೊಡುವುದಾಗಿ ತಿಳಿಸಿ ಮುಂದೆ ಹೋಗಿದ್ದಾಳೆ. ಬಳಿಕ ಎಲ್ಲರೂ ಸೇರಿ ಹಣ ಕೊಡದೆ ವಂಚಿಸಿದ್ದಾರೆ. ಕೆಮರಾ ಪಡೆದುಕೊಂಡ ಮಹಿಳೆಗೆ ಕರೆಮಾಡಿದಾಗ ಆಕೆಯ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ ಎಂದು ಯುವಕ ಕದ್ರಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next