Advertisement

ಮಂಗಳೂರು: ಕಾರು ಚಾಲಕನ ನಿರ್ಲಕ್ಷ್ಯ ; ಚರಂಡಿಗೆ ಜಾರಿದ ಬೃಹತ್ ಕಂಟೈನರ್

05:08 PM Jan 23, 2022 | Team Udayavani |

ಮಂಗಳೂರು:  ತೊಕ್ಕೊಟ್ಟು ಸಮೀಪದ ಕಾಪಿಕಾಡ್ ಎನ್‌ಎಚ್ 66 ರಲ್ಲಿ  ಭಾನುವಾರ ಜನವರಿ 23 ರ ಬೆಳಗ್ಗೆ ಕಾರುಗಳನ್ನು ಸಾಗಿಸುತ್ತಿದ್ದ ಕಂಟೈನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ  ಜಾರಿದ್ದು, ಭಾರಿ ಅನಾಹುತ ಮತ್ತು ನಷ್ಟ ತಪ್ಪಿದೆ.

Advertisement

ಸಿಸಿಟಿವಿ ದ್ರಶ್ಯಾವಳಿಗಳ ಪ್ರಕಾರ ಕಾರು ಚಾಲಕನ ನಿರ್ಲಕ್ಷ್ಯವು ಅಪಘಾತಕ್ಕೆ ಕಾರಣವಾಗಿದ್ದು, ಯಾವುದೇ ಸಿಗ್ನಲ್ ನೀಡದೆ ಎಡಕ್ಕೆ ಹಠಾತ್ ತಿರುವು ತೆಗೆದುಕೊಂಡಾಗ ಕಂಟೈನರ್ ಚಾಲಕ ತನ್ನ ವಾಹನದ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ.

ನಾಗುರಿ ಟ್ರಾಫಿಕ್ ಪೊಲೀಸ್ ಠಾಣೆಯಿಂದ ಕ್ರೇನ್ ಮೂಲಕ ಟ್ರಕ್ ಮೇಲೆತ್ತಲಾಗಿದ್ದು, ಗಂಟೆಗಳ ಕಾಲ ಎನ್‌ಎಚ್ 66 ರಲ್ಲಿ ಸಂಚಾರಕ್ಕೆ ತೊಂದರೆಯಾಗಿತ್ತು. ಕಂಟೈನರ್ ಟ್ರಕ್ ಮುಂಬಯಿಯಿಂದ ಕಾಸರಗೋಡಿಗೆ ಹುಂಡೈ ಕಾರುಗಳನ್ನು ಸಾಗಿಸುತ್ತಿತ್ತು ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next