Advertisement

Mangaluru ಗಾಂಜಾ ಸೇವನೆ: ಯುವಕನ ಬಂಧನ

12:06 AM Jun 17, 2024 | Team Udayavani |

ಮಂಗಳೂರು: ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಸೇವಿಸಿದ ಆರೋಪ ದಲ್ಲಿ ಮಂಗಳೂರು ಉತ್ತರ ಠಾಣಾ ಪೊಲೀಸರು ಶನಿವಾರ ಓರ್ವನನ್ನು ಬಂಧಿಸಿದ್ದಾರೆ.

Advertisement

ಕೇರಳದ ಮಹಮ್ಮದ್‌ ಶಾಮಿಲ್‌ (24) ಬಂಧಿತ ಆರೋಪಿ. ಜೂ.15ರಂದು ಸಂಜೆ ಪೊಲೀಸರು ರೌಂಡ್ಸ್‌ ಕರ್ತವ್ಯ ದಲ್ಲಿದ್ದಾಗ ಹಂಪನಕಟ್ಟೆ ಬಳಿ ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದ ಶಾಮಿಲ್‌ನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

ಗಾಂಜಾ ಸೇವನೆ: ಐದು ಮಂದಿ ವಶಕ್ಕೆ
ಮಣಿಪಾಲ: ಮಣಿಪಾಲದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಅಶೀಲ್‌ (20), ರೆನಜೋ ಎಸ್‌. ಚಂದ್ರಗಿರಿ (20), ಅಭಿನವ ಸುರೇಶ್‌ (20), ಶ್ರೀಹರಿ (19), ಅಭಿಜಿತ್‌ (20) ಆರೋಪಿಗಳು. ಫಾರೆನ್ಸಿಕ್‌ ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next