Advertisement

Mangaluru; ಕಾರಿಗೆ ಪೆಟ್ರೋಲ್‌ ಬದಲು ಡೀಸೆಲ್‌ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ

05:20 PM Apr 19, 2024 | Team Udayavani |

ಮಂಗಳೂರು: ಪೆಟ್ರೋಲ್‌ ಕಾರಿಗೆ ಡೀಸೆಲ್‌ ತುಂಬಿಸಿರುವ ಆರೋಪವೊಂದು ಬಲ್ಮಠ ಬಳಿಯ ಪೆಟ್ರೋಲ್‌ ಪಂಪ್‌ನಲ್ಲಿ ವರದಿಯಾಗಿದ್ದು, ಕಾರು ಮಾಲಕ ಹೋಟೆಲ್‌ ಉದ್ಯಮಿ ಜೀವನ್‌ ಶೆಟ್ಟಿ ಅವರು ಗ್ರಾಹಕ ನ್ಯಾಯಾಲಯದ ಮೊರೆ ಹೋಗಲು ಮುಂದಾಗಿದ್ದಾರೆ.

Advertisement

ಘಟನೆಯ ವಿವರ:
ಎ. 5ರಂದು ಮಧ್ಯಾಹ್ನ 12ಗಂಟೆಗೆ ಜೀವನ್‌ ಅವರು ಪೆಟ್ರೋಲ್‌ ತುಂಬಿಸಲೆಂದು ಪೆಟ್ರೋಲ್‌ ಪಂಪ್‌ಗೆ ತೆರಳಿದ್ದರು. ಪೆಟ್ರೋಲ್‌ ಟ್ಯಾಂಕ್‌ನ ಕ್ಯಾಪ್‌ ಮೇಲೆ ಪೆಟ್ರೋಲ್‌ ಎಂದು ನಮೂದಿಸಿದ್ದರೂ ಸಿಬಂದಿ ಅಚಾತುರ್ಯದಿಂದ ಡಿಸೇಲ್‌ ತುಂಬಿಸಿದ್ದಾರೆ. ಸಿಬಂದಿಯ ಎಡವಟ್ಟಿನಿಂದಾಗಿ ಕಾರಿನ ಎಂಜಿನ್‌ ಸಂಪೂರ್ಣ ಸೀಜ್‌ ಆಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಆರೋಪಿಸಲಾಗಿದೆ.

ಆರಂಭದಲ್ಲಿ ಪಂಪ್‌ ಮಾಲಕರು ವೆಚ್ಚ ಭರಿಸುವ ಭರವಸೆ ನೀಡಿದ್ದರು. ಬಳಿಕ ಪೆಟ್ರೋಲ್‌ ಪಂಪ್‌ ಮಾಲಕರು ನಷ್ಟ ತುಂಬಿಸಿಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ದೂರಿದ್ದು ಗ್ರಾಹಕ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next