Advertisement

Mangaluru: ಅಪಹರಣ ಮತ್ತು ಹಲ್ಲೆ ಆರೋಪದ ಮೇಲೆ 7 ಆರೋಪಿಗಳ ಬಂಧನ

08:05 PM Aug 26, 2023 | Team Udayavani |

ಮಂಗಳೂರು: ನಗರದಲ್ಲಿ ಆ 23 ರಂದು ನಡೆದ ಅಪಹರಣ ಮತ್ತು ದೈಹಿಕ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

Advertisement

ಖಾಸಗಿ ಕಾಲೇಜೊಂದರ ಬಳಿ ಇಬ್ಬರನ್ನು ಅಪಹರಿಸಿ ದೈಹಿಕವಾಗಿ ಹಲ್ಲೆ ನಡೆಸಿದ ಆರೋಪದಲ್ಲಿ ಪಾಣೆಮಂಗಳೂರಿನ ಇಬ್ರಾಹಿಂ ತಭೀಷ್ (19) ಮತ್ತು ಮೊಹಮ್ಮದ್ ಶಕೀಫ್ (19), ಬಂಟ್ವಾಳದ ಅಬ್ದುಲ್ಲ ಹನ್ನಾನ್ (19), ಮೊಹಮ್ಮದ್ ಶಾಹಿಕ್ (19) ಮತ್ತು ಮನ್ಸೂರ್ (37) ಮತ್ತು ಯು ಪಿ ತನ್ವೀರ್ (20) ಮತ್ತು ಬಜಾಲ್‌ ನ ಅಬ್ದುಲ್ ರಶೀದ್ (20) ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next