Advertisement

ಪ್ರಸಾದ್‌ ನೇತ್ರಾಲಯ :ಜು.14- ಹೊಸ ರೋಬೋಟಿಕ್‌ ಕಣ್ಣಿನ ಪೊರೆ ಚಿಕಿತ್ಸೆ ವ್ಯವಸ್ಥೆ ಉದ್ಘಾಟನೆ

01:10 PM Jul 12, 2024 | Team Udayavani |

ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಕಣ್ಣಿನ ಚಿಕಿತ್ಸೆಗೆ ಹೆಸರು ವಾಸಿಯಾದ ಪ್ರಸಾದ್‌ ನೇತ್ರಾಲಯ ಸಮೂಹ ಆಸ್ಪತ್ರೆಯು ಪ್ರಥಮ ಬಾರಿಗೆ ನೂತನ ರೋಬೋಟಿಕ್‌ ಕಣ್ಣಿನ ಪೊರೆ ಚಿಕಿತ್ಸೆ ವ್ಯವಸ್ಥೆಯನ್ನು ಮಂಗಳೂರಿನ ಪ್ರಸಾದ್‌ ನೇತ್ರಾಲಯ ಸೂಪರ್‌ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಆರಂಭಿಸಲಿದೆ ಎಂದು ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ| ಕೃಷ್ಣ ಪ್ರಸಾದ್‌ ಕೂಡ್ಲು ತಿಳಿಸಿದ್ದಾರೆ.

Advertisement

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಅತ್ಯಾಧುನಿಕ “ಲೆನ್ಸಾರ್‌ ರೋಬೊಟಿಕ್‌ ಲೇಸ್‌ ಕ್ಯಾಟರ್ಯಾಕ್ಟ್ ಸರ್ಜರಿ ಸಿಸ್ಟಮ್‌’ ಅನ್ನು ಪರಿಚಯಿಸಲಾಗುತ್ತಿದೆ. ಈ ಯಂತ್ರವು ಪೊರೆ ಚಿಕಿತ್ಸೆಗೆ ಬೇಕಾದ ಇನ್ಸಿಷನ್‌, ಕಣ್ಣಿನ ಪೊರೆ ಹೊರಗೆ ತೆಗೆಯುವುದು, ಲೆನ್ಸ್‌ ಅಳವಡಿಕೆ ಮೊದಲಾದ ಕಾರ್ಯಗಳನ್ನು ತಾನೇ ನಿರ್ವಹಿಸುತ್ತದೆ.

ಇದರ ಸಹಾಯದಿಂದ ಮಾಡಿದ ಪೊರೆ ಚಿಕಿತ್ಸೆಯು ಮಾನವ ಕೈಗಳಲ್ಲಿ ಮಾಡುವ ಶಸ್ತ್ರಚಿಕಿತ್ಸೆಗಿಂತ ಅತಿ ನಿಖರವಾಗಿರುತ್ತದೆ. ಕಣ್ಣಿನ ಒಳಗಡೆ ಲೆನ್ಸ್‌ ಅಳವಡಿಕೆ ಹಾಗೂ ನಿಯೋಜನೆ ನಿಖರವಾಗಿದ್ದು, ಲೇಸರ್‌ ಮುಖಾಂತರ ಕರಿಗುಡ್ಡೆಯ ದೃಷ್ಟಿ ಸರಿಪಡಿಸುವಿಕೆ ಮುಂತಾದವುಗಳನ್ನು ಮಾಡಬಹುದು.

ಶಸ್ತ್ರಚಿಕಿತ್ಸೆ ಬಳಿಕ ಪಡೆಯುವ ದೃಷ್ಟಿ ಅತಿ ಹೆಚ್ಚಿನ ಸ್ಪಷ್ಟತೆ ಹೊಂದಿರುತ್ತದೆ ಮತ್ತು ಶಸ್ತ್ರ ಚಿಕಿತ್ಸೆ ರೋಗಿ ಶೀಘ್ರವೇ ಚೇತರಿಕೆಗೊಳ್ಳುವರು ಎಂದರು.

Advertisement

ಜು.14ರಂದು ಉದ್ಘಾಟನೆ
ಪಂಪ್‌ವೆಲ್‌ ಉಜ್ಜೋಡಿಯಲ್ಲಿರುವ ನೇತ್ರಾಲಯದಲ್ಲಿ ಜು.14 ರಂದು ಸಂಜೆ 6 ಗಂಟೆಗೆ ಈ ತಂತ್ರ ಜ್ಞಾನವನ್ನು ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ್‌ ಎಸ್ಸೋ ನಾಯಕ್‌ ಉದ್ಘಾಟಿಸಲಿದ್ದು, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕ್ಯಾ| ಬ್ರಿಜೇಶ್‌ ಚೌಟ, ಶಾಸಕ ಡಿ.ವೇದವ್ಯಾಸ ಕಾಮತ್‌, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಲೆನ್ಸಾರ್‌ ವಿಷನ್‌ ಪ್ರೈ.ಲಿ. ಭಾರತ ಮತ್ತು ದಕ್ಷಿಣ ಏಷ್ಯಾ ಸ್ಥಾಪಕ ನಿರ್ದೇಶಕ ಸುಧೀರ್‌ ಕೌಲ್‌, ಮನಪಾ ಸದಸ್ಯ ಸಂದೀಪ್‌ ಗರೋಡಿ, ನೇತ್ರಜ್ಯೋತಿ ಚಾರಿಟೆಬಲ್‌ ಟ್ರಸ್ಟ್‌ ಟ್ರಸ್ಟಿ ರಘುರಾಮ್‌ ರಾವ್‌ ಅವರು ಮುಖ್ಯ ಅತಿಥಿಗಳಾಗಿರುವರು ಎಂದು ಅವರು ತಿಳಿಸಿದರು. ಆಡಳಿತ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್‌, ನಿರ್ದೇಶಕರಾದ ಡಾ| ವಿಕ್ರಮ್‌ ಜೈನ್‌, ಡಾ| ಹರೀಶ್‌ ಶೆಟ್ಟಿ, ಡಾ| ಜಾಕೋಬ್‌ ಚಾಕೋ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next