Advertisement

ಮಂಗಳೂರು: ನಾಳೆಯಿಂದ ಮತ್ತೆ ನೀರು ಪೂರೈಕೆ ಸ್ಥಗಿತ

01:28 AM May 19, 2019 | Sriram |

ಮಂಗಳೂರು: ರೇಷನಿಂಗ್‌ ನಿಯಮ ದಂತೆ ನಗರಕ್ಕೆ ಕಳೆದ ನಾಲ್ಕು ದಿನಗಳಿಂದ ನೀರು ಪೂರೈಕೆಯಾಗುತ್ತಿದ್ದು, ಮೇ 20ರಿಂದ ಐದು ದಿನ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.

Advertisement

ಮೇ 16 ಬೆ. 6ರಿಂದ ಮೇ 20ರ ಬೆ. 6ರ ವರೆಗೆ ನೀರು ಸರಬರಾಜು ಆಗಲಿದ್ದು, ಮೇ 20ರ ಬೆಳಗ್ಗೆ 6ರಿಂದ ಮೇ 24ರ ಬೆಳಗ್ಗೆ 6ರ ವರೆಗೆ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಶನಿವಾರ ನಗರಕ್ಕೆ ದಿನವಿಡೀ ನೀರು ಪೂರೈಕೆಯಾಗಿದ್ದು, ಶೇ.70ರಷ್ಟು ಪ್ರದೇಶಗಳಿಗೆ ನೀರು ತಲುಪಿದೆ.

ತುಂಬೆ ಅಣೆಕಟ್ಟಿನಲ್ಲಿ 3.62 ಮೀ.ನಷ್ಟಿದ್ದ ನೀರಿನ ಪ್ರಮಾಣ ಶನಿವಾರ 3.57 ಮೀ.ಗೆ ಇಳಿದಿದೆ.

ಸುಳ್ಯ: 2 ದಿನಕ್ಕೊಮ್ಮೆ ನೀರು
ಸುಳ್ಯ: ಬೇಸಗೆ ಬಿಸಿಯ ಪರಿಣಾಮ ನಗರದಲ್ಲಿ ನೀರಿನ ಕೊರತೆ ಎದುರಾಗಿದ್ದು, ನ.ಪಂ. ನಳ್ಳಿ ವ್ಯವಸ್ಥೆ ಮೂಲಕ ಪೂರೈಕೆ ಮಾಡುವ ಕುಡಿಯುವ ನೀರನ್ನು ಎರಡು ದಿನಕ್ಕೊಮ್ಮೆ ಬಿಡಲು ನಿರ್ಧರಿಸಲಾಗಿದೆ.

ಪುತ್ತಿಗೆ:ಪಂಪಿಂಗ್‌ ಮುಂದುವರಿಕೆ
ಉಡುಪಿ: ಸ್ವರ್ಣಾ ನದಿಯ ಭಂಡಾರಿಬೆಟ್ಟು ಮತ್ತು ಪುತ್ತಿಗೆಯ ಗುಂಡಿಯಿಂದ ಬಜೆ ಡ್ಯಾಂಗೆ ನೀರು ಹಾಯಿಸುವ ಪ್ರಕ್ರಿಯೆ ಶನಿವಾರವೂ ಮುಂದುವರಿದಿದ್ದು, ನಗರದ ಒಂದು ಹಂತದವರೆಗಿನ ನೀರಿನ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗಿದೆ.

Advertisement

ಶನಿವಾರ ಕೇವಲ 10 ದೂರುಗಳು ಮಾತ್ರ ಬಂದಿದ್ದವು. ನೀರು ಸಂಗ್ರಹ ವ್ಯವಸ್ಥೆ ಇಲ್ಲದ ಕೆಲವು ಕಾಲನಿ ನಿವಾಸಿಗಳಿಗೆ ಶನಿವಾರ ಕೂಡ 5 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಯಿತು. ಶನಿವಾರ ಮಾಣಾçಯಲ್ಲಿ 1, ಭಂಡಾರಿ ಬೆಟ್ಟಿನಲ್ಲಿ 2 ಮತ್ತು ಪುತ್ತಿಗೆಯಲ್ಲಿ 3 ಪಂಪ್‌ಗ್ಳ ಮೂಲಕ ನೀರು ಹಾಯಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next