Advertisement

ಈಶ್ವರಪ್ಪ ಈ ರಾಜ್ಯದ ಜನತೆಯ ಕ್ಷಮೆ ಕೇಳಬೇಕು: ಐವನ್ ಡಿಸೋಜಾ

10:32 AM Dec 08, 2019 | Naveen |

ಮಂಗಳೂರು: ಒಬ್ಬ ಮಹಿಳೆಯನ್ನ ಒಂದು ವಸ್ತುವಿಗೆ ಹೋಲಿಕೆ ಮಾಡಿದ್ದಾರೆ. ಬಿಜೆಪಿಗರ ಮನಸ್ಥಿತಿ ನೋಡಿ, ಹೇಳಿದ್ರೆ ಮಹಿಳೆಯರು, ಮಾತೆಯರು ಅಂತ ಮಾತನಾಡ್ತಾರೆ. ಒಬ್ಬ ಹಿರಿಯ ಸಚಿವ ಹೀಗೆ ಮಾತನಾಡೋದು ಎಷ್ಟು ಸರಿ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.

Advertisement

ಒಂದು ಐಶ್ವರ್ಯ ರೈಯನ್ನ ಎಷ್ಟು ಜನರಿಗೆ ಕೊಡೋದು ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಇವರಿಗೆ ಬಾಯಿ ಮತ್ತು ತಲೆಗೆ ಬ್ಯಾಲೆನ್ಸ್ ಸರಿ ಇದ್ಯಾ? ಎಲ್ಲಿಯಾದ್ರೂ ಕಾಂಬಿನೇಷನ್ ಸರಿಯಿಲ್ವಾ ಅನ್ನೋದು ನನ್ನ ಪ್ರಶ್ನೆ. ಇವರು ಈ ರಾಜ್ಯದ ಜನತೆಯ ಕ್ಷಮೆ ಕೇಳಬೇಕು.ನೀವು ಯಾರಿಗೆ ಬೇಕಾದ್ರೂ ಮಂತ್ರಿ ಕೊಡಿ ತಕರಾರಿಲ್ಲ. ಆದ್ರೆ ಹೋಲಿಕೆ ಯಾರಿಗೆ ಮಾಡಿದ್ರೀ ಅನ್ನೋದ್ರ ಮೇಲೆ ನಿಮ್ಮ ಮನಸ್ಥಿತಿ ಗೊತ್ತಾಗುತ್ತೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next