Advertisement

ಮಂಗಳೂರು: ಗಾಂಜಾ ಸಾಗಾಟ ಯತ್ನ; ನಾಲ್ವರ ಬಂಧನ

01:26 PM Nov 06, 2019 | Team Udayavani |

ಮಂಗಳೂರು: ಮಂಗಳೂರು ನಗರದ ತೊಕ್ಕೊಟ್ಟು ಬಳಿ ಮಂಗಳವಾರದಂದು ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ದಕ್ಷಿಣ ಉಪವಿಭಾಗದ ಎಸಿಪಿಯವರ ನೇತೃತ್ವದಲ್ಲಿ ಉಪವಿಭಾಗದ ರೌಡಿ ನಿಗ್ರಹ ದಳವು ಬಂಧಿಸಿದೆ.

Advertisement

ಮಂಜೇಶ್ವರದ ಮಜಿರ್ ಪಳ್ಳ ಧರ್ಮನಗರದ ಅಬೂಬಕ್ಕರ್ ಸಮದ್ ಅಲಿಯಾಸ್ ಸಮದ್ (24), ಮಂಜೇಶ್ವರ ವರ್ಕಾಡಿ ಗ್ರಾಮದ ಮಹಮದ್ ಅಸ್ರಫ್ ಅಲಿಯಾಸ್ ಆಶ್ರಫ್ (30), ಮಂಜೇಶ್ವರ ಕಡಂಬಾರು ಅಂಚೆ ದುರ್ಗಿಪಳ್ಯ ಮನೆಯ ಮಹಮದ್ ಅಫ್ರಿದ್ (22), ಮಂಜೇಶ್ವರ ಕಡಂಬಾರು ಅಂಚೆ ಮುಕ್ತಾನ ಮನೆಯ ಮಹಮದ್ ಅರ್ಷ್ದ್ (18) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತ ಆರೋಪಿಗಳಿಂದ 2,00,000 ರೂ. ಮೌಲ್ಯದ ಗಾಂಜಾ, 2,50,000 ರೂ. ಮೌಲ್ಯದ ಹುಂಡೈ ಐ-20 ಕಾರು, 50,000 ರೂ. ಮೌಲ್ಯದ ಎಕ್ಸಿಸ್ ಸ್ಕೂಟರ್ ಮತ್ತು 3 ಮೊಬೈಲ್ ಗಳು ಸೇರಿದಂತೆ ಒಟ್ಟು 5,00,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next