Advertisement

ಮಂಗಳೂರು ಮನೆ ಕಳ್ಳತನ ಪ್ರಕರಣ: ಏಳು ಮಂದಿಯ ಬಂಧನ

05:29 PM Dec 05, 2019 | Naveen |

ಮಂಗಳೂರು: ಮಂಗಳೂರು ನಗರದ ಬಲ್ಮಠ- ಬೆಂದೂರ್ ವೆಲ್ ರಸ್ತೆಯಲ್ಲಿರುವ ಅನೀತಾ ಎನ್. ಶೆಟ್ಟಿಯವರ ಮನೆಯ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ನವೆಂಬರ್ ತಿಂಗಳಿನಲ್ಲಿ ಮಂಗಳೂರು ನಗರದ ಬಲ್ಮಠ- ಬೆಂದೂರ್ ವೆಲ್ ರಸ್ತೆ ಪಕ್ಕದಲ್ಲಿರುವ ಅಪಾರ್ಟ್ಮೆಂಟಿನ ಅನೀತಾ ಎನ್. ಶೆಟ್ಟಿ ಎಂಬವರ ಪ್ಲಾಟಿನಲ್ಲಿ ಕಳ್ಳತನವಾದ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮಂಗಳೂರು ಕದ್ರಿ ಶಿವಭಾಗ್ ನ ರಾಕೇಶ್ ಬೋನಿಪಾಸ್ ಡಿ” ಸೋಜಾ (37 ವರ್ಷ), ಗೋವಾ ಮಾಡಗಾಂವ್ ನ ಅಶೋಕ್ ಬಂಡ್ರಗಾರ್ (36 ವರ್ಷ), ಗಣೇಶ್ ಬಾಪು ಪರಾಬ್ (37 ವರ್ಷ), ಮಂಗಳೂರು ಬೆಂದೂರ್ ವೆಲ್ ನ ಶಾಹೀರ್ ಮೊಹಮ್ಮದ್ (43 ವರ್ಷ), ಮಂಗಳೂರು ಕೊಲ್ಯ ಜನಾರ್ಧನ ಆಚಾರ್ಯ (41 ವರ್ಷ), ಮಂಗಳೂರು ಮಂಗಳಾ ನಗರ, ಮಂಗಳಾದೇವಿಯ ಚಂದನ್ ಆಚಾರ್ಯ (44 ವರ್ಷ), ಮಂಗಳೂರು ಕೊಟೆಕಾರ್ ನ ಪುರುಷೊತ್ತಮ್ ಆಚಾರ್ಯ (46 ವರ್ಷ) ರವರನ್ನು ಬಂಧಿಸಲಾಗಿದೆ.

ಬಂಧಿತರಿಂದ ಸುಮಾರು ಅಂದಾಜು 34 ಲಕ್ಷ ರೂ ಮೊತ್ತದ ಚಿನ್ನ ಹಾಗೂ ವಜ್ರ, ಕೃತ್ಯಕ್ಕೆ ಉಪಯೋಗಿಸಿದ ಒಂದು ಆಲ್ಟೊ ಕಾರ್, 1 ಹುಂಡೈ ಕಾರ್,  ಮೋಟಾರ್ ಸೈಕಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಮಂಗಳೂರು ಪೋಲಿಸ್ ಆಯುಕ್ತ ಪಿ.ಎಸ್.ಹರ್ಷ ನೇತೃತ್ವದಲ್ಲಿ ನಡೆದ ಈ ಕಾರ್ಯಚರಣೆಯಲ್ಲಿ ಡಿಸಿಪಿಗಳಾದ ಶ್ರೀಮಘ ಅರುಣಾಂಗ್ಸುಗಿರಿ, ಲಕ್ಷ್ಮಿ ಗಣೇಶ್, ಎಸಿಪಿ ಜಗದೀಶ್ ನಾಯಕ್ ,ಇನ್ಸ್ ಪೆಕ್ಟರ್ ಶಾಂತಾರಾಮ, ಕಾಂತಾರಾಜು, ಎಸ್ ಐ ಪ್ರದೀಪ್, ಮಾರುತಿ, ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next