Advertisement

ಮಂಗಳೂರು ಗಲಭೆ:100ಕ್ಕೂ ಅಧಿಕ ಮಂದಿಗೆ ನೋಟಿಸ್‌

01:41 AM Jan 20, 2020 | Sriram |

ಮಂಗಳೂರು: ನಗರದಲ್ಲಿ ಡಿ. 19ರಂದು ನಡೆದ ಹಿಂಸಾಚಾರದಲ್ಲಿ ತೊಡಗಿದವರನ್ನು ಸಿಸಿ ಕೆಮರಾ, ವೀಡಿಯೋ ಚಿತ್ರೀಕರಣ, ಮೊಬೈಲ್‌ ಲೊಕೇಶನ್‌ ಮತ್ತಿತರ ಸಾಕ್ಷ್ಯಾಧಾರಗಳನ್ನು ಆಧರಿಸಿ ಗುರುತಿಸಲಾಗಿದ್ದು, 100ಕ್ಕೂ ಹೆಚ್ಚು ಮಂದಿಗೆ ಜ. 20ರಂದು ತನಿಖೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ನೋಟಿಸ್‌ ಜಾರಿಗೊಳಿಸಿದ್ದಾರೆ.

Advertisement

ಗಲಭೆ ಘಟನೆಯಲ್ಲಿ ಕೇರಳ ದವರೂ ಭಾಗವಹಿಸಿದ್ದರು ಎಂಬ ಆರೋಪ ಕೇಳಿ ಬಂದಿದ್ದು, ನೋಟಿಸ್‌ ಪಡೆದವರಲ್ಲಿ ಕರ್ನಾಟಕ- ಕೇರಳ ಗಡಿ ಭಾಗದವರೂ ಸೇರಿದ್ದಾರೆ.
ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರವು ಸಿಐಡಿಗೆ ಹಸ್ತಾಂತರಿಸಿದ್ದು, ಸಿಐಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮ್ಯಾಜಿಸ್ಟ್ರೇಟ್‌ ತನಿಖೆಯೂ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next