Advertisement

ಮಂಗಳೂರು: ಪಂಪ್ ವೆಲ್ ಫ್ಲೈ ಓವರ್ ಅಣಕು ಉದ್ಘಾಟನಾ ಪ್ರದರ್ಶನ

07:15 PM Jan 01, 2020 | Naveen |

ಮಂಗಳೂರು: ಕಳೆದ 9 ವರ್ಷಗಳಿಂದ ನನೆಗುದಿಗೆ ಬಿದ್ದು ಸಾಕಷ್ಟು ಟೀಕೆಗೂ ಒಳಗಾಗಿರುವ ಪಂಪ್‌ವೆಲ್ ಫ್ಲೈ ಓವರ್ ಅನ್ನು ಜನವರಿ ಮೊದಲ ವಾರಕ್ಕೆ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಆಶ್ವಾಸನೆ ನೀಡಿದ್ದರು. ಆದರೆ, ತಾವು ನೀಡಿದ್ದ ಅಂತಿಮ ಗಡುವು ಕೂಡ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದವರು ಬುಧವಾರ ಫ್ಲೈ ಓವರ್ ಅಣಕು ಉದ್ಘಾಟನೆ ನೆರವೇರಿಸಿ ಪ್ರತಿಭಟನೆ ನಡೆಸಿದರು.

Advertisement

ಬಿಜೆಪಿ ಸಚಿವರು, ಸಂಸದರ ಹಾಗೂ ಶಾಸಕರ ಮುಖವಾಡಗಳನ್ನು ಹಾಕಿಕೊಂಡು ಈ ರೀತಿಯಾಗಿ ಫ್ಲೈ ಓವರ್‌ನ ಉದ್ಘಾಟನೆ ನೆರವೇರಿಸಿ ಗಮನಸೆಳೆದರು.

ಈ ವೇಳೆ ವಿಧಾನಪರಿಷತ್ ಸದಸ್ಯ ಐವನ್ ಡಿ`ಸೋಜಾ ಮಾತನಾಡಿ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಅಸಮರ್ಪಕ ಸಂಸದ. ಒಂದೆಡೆ ಪ್ರಧಾನಿ ಮೋದಿ ಅವರು ದೇಶದ ಬಗ್ಗೆ ಮಾತನಾಡುತ್ತಾರೆ. ಇತ್ತ ಸಂಸದರಿಗೆ ಹತ್ತು ವರ್ಷಗಳಲ್ಲಿ ಒಂದು ಮೇಲ್ಸೇತುವೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಕೇಂದ್ರದಲ್ಲಿ, ರಾಜ್ಯದಲ್ಲಿ, ಪಾಲಿಕೆ, ದ.ಕ. ಜಿ.ಪಂನಲ್ಲಿ ಬಿಜೆಪಿ ಆಡಳಿತದಲ್ಲಿದ್ದರೂ, ಜಿಲ್ಲೆ ಅಭಿವೃದ್ಧಿ ಕಾಣುತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next