Advertisement

ಸರಕಾರ ಪೊಲೀಸ್ ಅಥವಾ ಪ್ರತಿಭಟನಾಕಾರರ ಪರ ಅಲ್ಲ, ನ್ಯಾಯದ ಪರ: ಕೋಟಾ ಶ್ರೀನಿವಾಸ್ ಪೂಜಾರಿ

01:31 PM Dec 26, 2019 | Naveen |

ಮಂಗಳೂರು: ಕಲ್ಲು ತೂರಾಟ, ಠಾಣೆಗೆ ದಿಗ್ಭಂದನ, ಬಂದೂಕು ಅಂಗಡಿಯೊಳಕ್ಕೆ ನುಗ್ಗಲು ಯತ್ನ ಮೊದಲಾದವು ಶಾಂತಿಯುತ ಪ್ರತಿಭಟನೆಯಯ ಭಾಗವಾಗಿದೆಯೇ ?. ಸಿದ್ದರಾಮಯ್ಯ, ಕುಮಾರಸ್ವಾಮಿ, ಗುಂಡೂರಾವ್, ಖಾದರ್ ಯಾವುದೇ ಹೇಳಿಕೆ ಕೊಡುವ ಮೊದಲು ಅವರವರ ಆತ್ಮವನ್ನು ವಿಮರ್ಶಿಸಿಕೊಳ್ಳಲಿ  ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.

Advertisement

ಮಂಗಳೂರು ಗೋಲಿಬಾರ್ ಪ್ರಕರಣದ ವಿಚಾರವಾಗಿ ಅವರು ಗುರುವಾರದಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಗೋಲಿಬಾರ್ ಎಂಬುದು ಅನಿವಾರ್ಯವಾಗಿರಬಹುದು. ಅಂದಿನ ಪರಿಸ್ಥಿತಿ ನೋಡಿ ಪೊಲೀಸರೇ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಲ್ಲಿ ಸರಕಾರದ ಪಾತ್ರ ಇಲ್ಲ. ರಾಜ್ಯ ಸರಕಾರ ಪೊಲೀಸ್ ಅಥವಾ ಪ್ರತಿಭಟನಾಕಾರರ ಪರ ಅಲ್ಲ. ನ್ಯಾಯದ ಪರ ಎಂದು ಇದೆ ವೇಳೆ  ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next