Advertisement

ಮಂಗಳೂರು :ಬಂದ್ ವಿಫಲಗೊಳಿಸಿದ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ: ಸಚಿವ ಕೋಟ

10:30 AM Jan 09, 2020 | Team Udayavani |

ಮಂಗಳೂರು: ಭಾರತ್ ಬಂದ್ ವಿಫಲಗೊಳಿಸಿದ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ. ‘ಬಂದ್ ಆಶಾವಾದಿಗಳಿಗೆ’ ನಿರಾಶೆಯಾಗಿದೆ. ಜನ ನಿರಾಳವಾಗಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

Advertisement

ಬುಧವಾರದಂದು ನಡೆಯುತ್ತಿರುವ ಸಾರ್ವತ್ರಿಕ ಮುಷ್ಕರ ಕುರಿತಾಗಿ ಮಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು. ಮಂಗಳೂರಿಗೆ ಅಮಿತ್ ಶಾ ಆಗಮನದ ಕುರಿತಾಗಿ ಗೋ ಬ್ಯಾಕ್ ಹೇಳಿಕೆ ನೀಡಿದ ಐವನ್ ಹೇಳಿಕೆಯ ಕುರಿತಾಗಿ ಪ್ರತಿಕ್ರಿಯಿಸಿದ ಅವರು ಹೊಳೆ ದಾಟಲು ದೊಣ್ಣೆ ನಾಯಕನ ಒಪ್ಪಿಗೆ ಬೇಕಾಗಿಲ್ಲ. ಅಮಿತ್ ಶಾ ಆಗಮನವನ್ನು ಜನ ಆಶಾವಾದದಿಂದ ನಿರೀಕ್ಷಿಸುತ್ತಿದ್ದಾರೆ. ಐವನ್ ಕೂಡ ಪ್ರೀತಿಯಿಂದ ಸ್ವಾಗತಿಸಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next