Advertisement

ಮಂಗಳೂರಿನಲ್ಲಿ ಗ್ಯಾಂಗ್ ವಾರ್: ತಮ್ಮನ ಮೇಲಿನ ದ್ವೇಷಕ್ಕೆ ಅಣ್ಣನ ಹತ್ಯೆ

08:48 AM Jan 22, 2018 | |

ಮಂಗಳೂರು: ಮನೆಯೊಳಗೆ ನುಗ್ಗಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸೋಮವಾರ ನಸುಕಿನ ಜಾವ  ಪಣಂಬೂರು ಬಳಿಯಲ್ಲಿ ನಡೆದಿದೆ.

Advertisement

ಶಿವರಾಜ್‌(39) ಹತ್ಯೆಯಾದ ವ್ಯಕ್ತಿ. ಮೆಂಡನ್‌ ಗ್ಯಾಂಗ್‌ನ ಭರತೇಶ್‌ನ ಅಣ್ಣ ಎಂದು ತಿಳಿದು ಬಂದಿದೆ. ಭರತೇಶನ್‌ನ ಮೇಲಿನ ದ್ವೇಷಕ್ಕೆ ಶಿವರಾಜ್‌ನನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ರೌಡಿ ಶೀಟರ್ ಭರತೇಶ್ ಯಾವಾಗಲೂ ಟೆರೆಸ್ ಮೇಲೆ ಮಲಗುತ್ತಿದ್ದ. ಆದರೆ ನಿನ್ನೆ ಮಾತ್ರ ಕಾರಣಾಂತರಗಳಿಂದ ಭರತೇಶ್ ಮನೆಯೊಳಗೆ ಮಲಗಿದ್ದು, ಶಿವರಾಜ್ ಟೆರೆಸ್ ಮೇಲೆ ಮಲಗಿದ್ದ. ಆರೋಪಿಗಳು ಕತ್ತಲಲ್ಲಿ ಭರತೇಶ್ ಎಂದು ತಿಳಿದು ಶಿವರಾಜ್ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದರು. ಶಿವರಾಜ್ ಯಾವುದೇ ಕ್ರಿಮಿನಲ್ ಹಿನ್ನಲೆ ಹೊಂದಿಲ್ಲ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next