Advertisement

ಕಾಂಗ್ರೆಸ್ ನಾಶ ಆಗಿಲ್ಲ, ಕೆಲವರು ಅಧಿಕಾರದ ಅಮಲಿನಲ್ಲಿ ಮಾತನಾಡುತ್ತಿದ್ದಾರೆ: ರಮಾನಾಥ ರೈ

11:05 AM Feb 27, 2020 | Team Udayavani |

ಮಂಗಳೂರು: ಕಾಂಗ್ರೆಸ್ ನಾಶ ಆಗಿದೆ ಅಂತ ಅಪಹಾಸ್ಯ ಮಾಡುವುದು ಸರಿಯಲ್ಲ. ಧರ್ಮದ ಅಮಲನ್ನು ತಲೆಗೆ ಹತ್ತಿಸಿ ಕೆಲವರು ಅಧಿಕಾರಿಕ್ಕೆ ಬಂದಿದ್ದಾರೆ. ಈಗ ಅಧಿಕಾರದ ಅಮಲಿನಲ್ಲಿ ಮಾತನಾಡುತ್ತಿದ್ದಾರೆ, ಜನರಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ವಿರೋಧ ಪಕ್ಷವಾಗಿರಲು ಕಾಂಗ್ರೆಸ್ ನಾಲಾಯಕ್ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಬಡವರಿಗೆ ಮನೆ ಕಟ್ಟಿಕೊಡಲು ಇವರಿಗೆ ಆಗುತ್ತಿಲ್ಲ, ಪರ್ಸಂಟೇಜ್ ಕೆಲಸಗಳು ಮಾತ್ರ ಬಿಜೆಪಿಯಿಂದ ಆಗುತ್ತಿದೆ ಆರೋಪಿಸಿದರು.

ಅಕ್ರಮ ಗಣಿಗಾರಿಕೆ ಯಾರು ನಡೆಸಿದ್ದಾರೆ, ಯಾರು ಜೈಲಿಗೆ ಹೋಗಿದ್ದಾರೆ ಎಲ್ಲವೂ ಜನರಿಗೆ ಗೊತ್ತಿದೆ. ಅಕ್ರಮ ಗಣಿಗಾರಿಕೆ ಮಾಡಿ ಜೈಲಿಗೆ ಹೋದವರನ್ನು ಮಂತ್ರಿ ಮಾಡಿ ಚರಿತ್ರೆ ನಿರ್ಮಿಸಿದ್ದಾರೆ. ಕೇಂದ್ರದ ಹಣದಿಂದ ಆಪರೇಷನ್ ಕಮಲ ಮಾಡಿ ಬಿಜೆಪಿಗೆ ಅಧಿಕಾರಿ ಸಿಕ್ಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next